ರಾಯಚೂರು: ರಾಯಚೂರಿನಲ್ಲಿ ಕೊಂಚ ಸುಧಾರಿಸಿದ್ದ ಕೊರೋನಾ ಇಂದು ಮತ್ತೆ ತನ್ನ ಪ್ರಭಾವ ಬೀರಿದೆ.
ಮಹಾರಾಷ್ಟ್ರದಿಂದ ಮರಳಿದ ಕೂಲಿ ಕಾರ್ಮಿಕರಲ್ಲಿ ಮತ್ತೆ ಇಂದು ೫ ಪ್ರಕರಣಗಳು ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೭೦ ಗಡಿಗೆ ದಾಟಿದೆ.
ಕಳೆದ ಮೂರು ದಿನಗಳಿಂದ ಯಾವುದೇ ಪ್ರಕರಣಗಳಿಲ್ಲದೆ ಜನ ನಿಟ್ಟುಸಿರು ಬಿಟ್ಟಿದ್ದರು.ಆದರೆ ಇಂದು ಮತ್ತೆ ಮೊದಲನೇ ಹೆಲ್ತ್ ಬುಲೆಟಿನ್ ಗೆ ಜಿಲ್ಲೆಯಲ್ಲಿ ೫ ಕೊರೋನಾ ಪಾಸಿಟಿವ್ ಬರುವ ಮುಖಾಂತರ ಮತ್ತೆ ಅಚ್ಚರಿ ಮೂಡಿಸಿದೆ.
ಪಿ-೨೩೨೧, ಪಿ- ೨೩೨೨, ಪಿ-೨೩೨೩, ಪಿ-೨೩೨೪ ಮತ್ತು ಪಿ-೨೩೨೫ ವ್ಯಕ್ಯಿಗಳಿಗೆ ಸೋಂಕು ಹರಡಿದೆ.ಇವರು ಕೂಡ ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿ ಬಂದವರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು ೭೧ ಕ್ಕೆ ಏರಿದಂತಾಗಿದೆ.
ಎಲ್ಲ ಸೋಂಕಿತರನ್ನು ಈಗಾಗಲೆ ಆಯಾ ಕ್ವಾರೆಂಟೈನ್ ಕೇಂದ್ರದಿAದ ನಗರದ ಓಪೆಕ್ ಆಸ್ಪತ್ರೆಯ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎ ವೆಂಕಟೇಶಕುಮಾರ್ ತಿಳಿಸಿದರು.
ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ರಾಯಚೂರು