ಆರೋಗ್ಯ / HEALTH

ಬಿಸಿಯೂಟ ನೌಕರರಿಗೆ ಸಂಭಾವನೆ ಕೊಡಿ..

Published

on

ಸಿಂಧನೂರು(ರಾಯಚೂರು): ಕ್ವಾರೈಂಟನ್ ಕೇಂದ್ರಗಳಲ್ಲಿ ಅಡುಗೆ ಮಾಡುವ ಬಿಸಿಯೂಟ ನೌಕರರಿಗೆ ಸಂಭಾವನೆ ನೀಡಬೇಕು ಎಂದು ಕಾರ್ಮಿಕ ಮುಖಂಡ ಶೇಕ್ಷಖಾದ್ರಿ ಹೇಳಿದ್ದಾರೆ.
ನಗರದ ತಾಲೂಕು ಪಂಚಾಯತಿ ಕಾರ್ಯಾಲಯ ಎದುರು ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು,ಕೊರೊನಾ ಲಾಕ್‌ಡೌನ್ ನಡುವೆಯೂ ಬಿಸಿಯೂಟ ನೌಕರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕ್ವಾರೈಂಟನ್ ಕೇಂದ್ರಗಳಲ್ಲಿ ಅಡುಗೆ ಮಾಡುತ್ತಿದ್ದಾರೆ.
ಆದರೆ ಈ ಕೆಲಸಕ್ಕೆ ಸರ್ಕಾರ ಯಾವುದೇ ಸಂಭಾವನೆ ನಿಗದಿ ಮಾಡಿಲ್ಲ. ಕೂಡಲೇ ಸರ್ಕಾರ ಬಿಸಿಯೂಟ ನೌಕರರ ವೇತನವನ್ನು ನೀಡಬೇಕು.ಬಿಸಿ ಊಟ ನೌಕರರನ್ನು ಕೆಲಸವನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು…
ನಂತರ ಅವರು, ಬೇಡಿಕೆಯುಳ್ಳ ಮನವಿ ಪತ್ರವನ್ನು ಅಕ್ಷರ ದಾಸೋಹ ಅಧಿಕಾರಿಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ರಿಗೆ ಸಲ್ಲಿಸಿದರು.ಈ ಸಂದÀರ್ಭದಲ್ಲಿ ಕೆ.ರೇಣುಕಮ್ಮ.ವಿಶಾಲಾಕ್ಷಮ್ಮ.ಶರಣಮ್ಮ ಪಾಟೀಲ್ ಭಾಗವಹಿಸಿದ್ದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Click to comment

Trending

Exit mobile version