ದೇಶ - ವಿದೇಶ

ಜೂ.7ರಂದು ಡಿ.ಕೆ.ಶಿವಕುಮಾರ್ ಪದಗ್ರಹಣ..ಮಳವಳ್ಳಿಯಲ್ಲಿ ಭರ್ಜರಿ ತಯಾರಿ..

Published

on

ಮಳವಳ್ಳಿ(ಮಂಡ್ಯ):ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮವನ್ನು ವಿನೂತನವಾಗಿ ಆಯೋಜಿಸುವ ಹಿನ್ನೆಲೆಯಲ್ಲಿ
ಮಾಜಿ ಸಚಿವ ನರೇಂದ್ರ ಸ್ವಾಮಿ ನೇತೃತ್ವದಲ್ಲಿ ತಾಲ್ಲೂಕಿನ ಕಾರ್ಯಕರ್ತರ ಸದಸ್ಯರುಗಳ ಪೂರ್ವ ಭಾವಿ ಸಭೆ ನಡೆಯಿತು.
ಅಂದ ಹಾಗೇ ಮಳವಳ್ಳಿ ಪಟ್ಟಣ ರೈತ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಮಟ್ಟದಲ್ಲಿ ದೂರದರ್ಶನದ ಮೂಲಕ ತಾವೂ ಸಹ ವೀಕ್ಷಿಸಿ ಸಂವಿಧಾನದ ಪ್ರತಿಜ್ಞೆ ಓದುವುದರ ಮೂಲಕ ಆಚರಿಸಬೇಕು ಎಂದು ತಿರ್ಮಾನಿಸಲಾಯಿತು.
ಇನ್ನೂ ಸಭೆ ಬಳಿಕ ಮಾಜಿ ಶಾಸಕ ಪಿ.ಎಂ.ನರೇAದ್ರಸ್ವಾಮಿ ಮಾತನಾಡಿ, ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಜೂ.೭ರಂದು ಅಧಿಕಾರ ಪದಗ್ರಹಣ ಸ್ವೀಕರಿಸಲಿದ್ದು,ಅಂದು೩ ಕಾರ್ಯಾಧ್ಯಕ್ಷರೊಂದಿಗೆ ಸೀಮಿತ ಮಂದಿಗಳೊAದಿಗೆ ಅಧ್ಯಕ್ಷರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಅಲ್ಲದೆ,ಅAದು ಮಳವಳ್ಳಿ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ಹಾಗೂ ಮಳವಳ್ಳಿ ಪಟ್ಟಣದ ೫ ಕಡೆ ಕಾರ್ಯಕ್ರಮವನ್ನು ನೇರ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ.ಇದಲ್ಲದೆ ಅಧಿಕಾರ ಸ್ವೀಕಾರ ಸಮಾರಂಭವನ್ನು ವೀಕ್ಷಿಸುವ ಎಲ್ಲಾ ಕಾರ್ಯಕರ್ತರು ಕೆಪಿಸಿಸಿ ಕಚೇರಿಯ ದೂರವಾಣಿ ನೀಡಲಿದ್ದು,ಎಲ್ಲಾ ಕಾರ್ಯಕರ್ತರು ಮಿಸ್ ಕಾಲ್ ಮಾಡುವ ಮೂಲಕ ನೂತನ ಕಾಂತ್ರಿ ಮಾಡಲಿದ್ದೇವೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು,ಸುಂದರ್‌ರಾಜ್,ತಾ.ಪA ಅಧ್ಯಕ್ಷ ಸುಂದರೇಶ್, ಕೆಪಿಸಿಸಿ ಕಾರ್ಯದರ್ಶಿ ಹರೀಶ್ ಬಾಬು, ಜಿಲ್ಲಾ ಉಸ್ತುವಾರಿಗಳಾದ ಸುರೇಶ್ ಕಂಠಿ, ರಾಮಕೃಷ್ಣ, ಸೇರಿದಂತೆ ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು, ಪುರಸಭೆ ಸದಸ್ಯರು, ಎಲ್ಲಾ ತಾಲ್ಲೂಕಿನ ಕಾರ್ಯಕರ್ತರು ಹಾಜರಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Click to comment

Trending

Exit mobile version