ಹುಬ್ಬಳ್ಳಿ:ನನ್ನನ್ನು ಸಂಪುಟದಿ0ದ ಕೈ ಬಿಡಲ್ಲ,ಬದಲಿಗೆ ಈ ಸುದ್ದಿ ಕೇವಲ ಊಹಾಪೋಹ ಅಷ್ಟೇ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಪಕ್ಷ ನನ್ನ ಹಿನ್ನೆಲೆ ನೋಡಿ ನನಗೆ ಮಂತ್ರಿ ಸ್ಥಾನ ನೀಡಿದೆ.ನಾನು ಸಂಘಟನೆಯಿAದ ಬಂದವಳು.ಸಾಮಾನ್ಯ ಕಾರ್ಯಕರ್ತೆಯಾಗಿಯೂ ಪಕ್ಷಕ್ಕೆ ಕೆಲಸ ಮಾಡಿರುವ ಅನುಭವ ನನಗಿದೆ.ಮಹಿಳಾ ಶಾಸಕರಲ್ಲಿ ನಾನೊಬ್ಬಳೇ ಹಿರಿಯ ಶಾಸಕಿ. ನನ್ನ ಕೈ ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇನ್ನು ಬೆಳಗಾವಿ ಬಂಡಾಯದ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ. ಹಿರಿಯರು ಈ ಬಗ್ಗೆ ಯೋಚನೆ ಮಾಡುತ್ತಾರೆ. ಮನೆ ಅಂದ ಮೇಲೆ ಜಗಳ ಇರುತ್ತದೆ. ಮನೆ ಹಿರಿಯರು ಎಲ್ಲಾ ಸರಿ ಮಾಡುತ್ತಾರೆ ಎಂದರು.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ