ಮೈಸೂರು

ನಂಜನಗೂಡಿನಲ್ಲಿ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ

Published

on

ನಂಜನಗೂಡಿನ ಯಾತ್ರಿ ನಿವಾಸದ ಕಲ್ಯಾಣ ಮಂಟಪದಲ್ಲಿ ಇಂದು ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ನಂತರ ಮಾತನಾಡಿದ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ‘ಲಯನ್ ನಾಗರಾಜ್ ವಿ ಬೈರಿ’ ವಿಶ್ವದಾದ್ಯಂತ ಸುಮಾರು 7 ಕೋಟಿಗೂ ಹೆಚ್ಚು ಸೇವಾ ಸಂಸ್ಥೆಗಳಿದ್ದು ಅದರಲ್ಲಿ ಮೊದಲನೇ ಸ್ಥಾನದಲ್ಲಿ ನಮ್ಮ ಲಯನ್ಸ್ ಸಂಸ್ಥೆ ಇದೆ. ಕಳೆದ 46 ವರ್ಷಗಳಿಂದ ನಂಜನಗೂಡಿನಲ್ಲಿ ನಮ್ಮ ಲಯನ್ಸ್ ಸಂಸ್ಥೆಯು ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಉತ್ತಮ ಸೇವಾಕಾರ್ಯವನ್ನು ಮಾಡಿಕೊಂಡು ಬರುತ್ತಿದೆ ಎಂದು ಲಯನ್ ಸಂಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಇನ್ನೂ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿದ್ದಂತಹ ಕೆ.ಜಿ ಮಹೇಶ್ ನೂತನ ಅಧ್ಯಕ್ಷರಾದಂತಹ ಲಯನ್ ಉಮೇಶ್ ರವರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದರು. ನಂತರ ಮಾತಾನಾಡಿದ ಉಮೇಶ್ ನನ್ನ ಅವಧಿಯಲ್ಲಿ ಹಿರಿಯರ,ಸಹೋದ್ಯೋಗಿಗಳ ಸಲಹೆ,ಸಹಕಾರ ಪಡೆದು ಉತ್ತಮ ಸೇವೆ ಮಾಡುವುದಾಗಿ ತಿಳಿಸಿದರು. ಇದೇ ಸಂದರ್ಭ ಶಾಲೆಗಳಿಗೆ ಬ್ಯಾಂಡ್ ವಾದನ, ಅಲ್ಮೇರಾ, ರೈತರಿಗೆ ಕೃಷಿ ಪರಿಕರ ಸೇರಿದಂತೆ ಆಶಾ ಕಾರ್ಯಕರ್ತರಿಗೆ ವಿವಿಧ ಸವಲತ್ತುಗಳನ್ನು ಲಯನ್ ಸಂಸ್ಥೆ ವತಿಯಿಂದ ನೀಡಲಾಯಿತು. ನಂತರ ನೂತನ ಅಧ್ಯಕ್ಷರು ಸೇರಿದಂತೆ ಸಂಸ್ಥೆಯ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

Click to comment

Trending

Exit mobile version