ರಾಜ್ಯದ ಜನತೆಯ ಧಾರ್ಮಿಕ ಭಾವನೆ, ಭಕ್ತಿಗೆ ದಕ್ಕೆ ತಂದಿದ್ದು,ವಾಟ್ಸ್ ಆಪ್ ನಲ್ಲಿ ದೇವತೆಗಳನ್ನು ಅಪಮಾನ ಮಾಡಿದ್ದಾರೆ.ಹಿಂದೂ ದೇವತೆಗಳನ್ನ ಅವಹೇಳನಕಾರಿಯಾಗಿ ನಿಂದಿಸಿ, ಹಿಂದೂಗಳ ಭಕ್ತಿ ನಂಬಿಕೆಗಳಿಗೆ ಅಗೌರವ ತೋರಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಹನುಮೇಗೌಡ, ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಡಿಜಿಪಿ ಪ್ರವೀಣ್ ಸೂದ್ ಗೆ ದೂರುನೀಡಿದ್ದಾರೆ.ದೇವತೆಗಳ ಚಾರಿತ್ರ್ಯವಧೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆಯಾಗುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.