ರಾಯಚೂರು

ರೌಡಕುಂದ ಸಂಸ್ಥಾನಮಠದ ಮರಿಸಿದ್ದಲಿಂಗಸ್ವಾಮೀಜಿ ಲಿಂಗೈಕ್ಯ…!

Published

on

ರಾಯಚೂರು: ರಾಯಚೂರಿನ ಸಿಂಧನೂರು ತಾಲೂಕಿನ ರೌಡಕುಂದ ಸಂಸ್ಥಾನಮಠದ 13 ನೇ ಪೀಠಾಧಿಪತಿ ಮರಿ ಸಿದ್ದಲಿಂಗಸ್ವಾಮೀಜಿ (44) ಲಿಂಗೈಕ್ಯರಾಗಿದ್ದಾರೆ. ಉಸಿರಾಟ ತೊಂದರೆ ಹಾಗೂ ಅನಾರೋಗ್ಯದ ಹಿನ್ನೆಲೆ ಮೂರು ದಿನಗಳ ಹಿಂದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಸ್ವಾಮಿಜಿಯ ಸಾವಿನ ಬಳಿಕ ಕೊರೋನಾ ಪಾಸಿಟಿವ್ ವರದಿ ಧೃಡಪಟ್ಟಿದ್ದು, ಅಪಾರ ಭಕ್ತ ಸಮೂಹ ಹೊಂದಿರುವ ಸ್ವಾಮೀಜಿಯ ದರ್ಶನ ಪಡೆಯಲು ಸಾಕಷ್ಟು ಮಂದಿ ದೌಡಯಿಸುತ್ತಿದ್ದರು. ಕೋವಿಡ್ ನಿಯಮಾನುಸಾರ ಸ್ವಾಮಿಜಿಯ ಅಂತ್ಯಕ್ರಿಯೆಗೆ ಮುಂದಾದ ಅಧಿಕಾರಿಗಳು ಅಂತ್ಯಸಂಸ್ಕಾರ ಮಾಡುವುದಕ್ಕೆ ಅವಕಾಶ ಕೊಡಿ ಎಂದು ಭಕ್ತರಲ್ಲಿ ಮನವಿ ಮಾಡಿ ಅಂತ್ಯಸಂಸ್ಕಾರ ಮಾಡಲು ಮುಂದಾದರು.

Click to comment

Trending

Exit mobile version