ಬೆಂಗಳೂರು

ಮಗ್ಗಕ್ಕೆ ನೇಣು ಹಾಕಿಕೊಂಡ ನೇಕಾರ….ಈ ಸಾವು ನ್ಯಾಯವೇ..?

Published

on

ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದ ಎದುರಾದ ಸಂಕಷ್ಟವನ್ನು ಎದುರಿಸಲಾಗದ ನೇಕಾರನೊಬ್ಬ ಸೀರೆ ನೇಯುವ ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.ಮೃತ ನೇಕಾರ 55 ವರ್ಷದ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಾಡ್೯ ನಂ 5ರ ಅಗ್ರಹಾರ ಬಡಾವಣೆಯಲ್ಲಿ ಪತ್ನಿಯೊಂದಿಗೆ ನೇಕಾರಿಕೆ ಮಾಡಿಕೊಂಡು ಕಳೆದ 25 ವರ್ಷಗಳಿಂದಲೂ ಜೀವನ ನಡೆಸುತ್ತಿದ್ದರು.ಇದ್ದ ಮಕ್ಕಳು ಇವರನ್ನು ತೊರೆದು ದೂರ ಉಳಿದಿದ್ದರು. ಲಾಕ್ ಡೌನ್ ನಿಂದ ದಂಪತಿಗಳಿಗೆ ಜೀವನ ನಡೆಸುವುದೂ ಕೂಡಾ ದುಸ್ಥರವಾಗಿತ್ತು. ಇಂದು ಪತ್ನಿ ಸೊಪ್ಪು ತರಲು ಹೊರಗೆ ಹೋಗಿದ್ದಾಗ ಲಕ್ಷ್ಮೀಪತಿ ಬೆಳಿಗ್ಗೆ 7.30ರ ಸಂದರ್ಭದಲ್ಲಿ ಸೀರೆ ನೇಯುವ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕೊರೋನಾ ಪ್ರಕರಣ ನೇಕಾರಿಕೆ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ತತ್ಪರಿಣಾಮವಾಗಿ ಇದುವರೆಗೂ ಒಟ್ಟು 11 ನೇಕಾರರು ನೇಣಿಗೆ ಶರಣಾಗಿದ್ದಾರೆ.
ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ಸ್ ಟಿವಿ ಬೆಂಗಳೂರು

Click to comment

Trending

Exit mobile version