ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯತ್ ಅದ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್ ರವರು ಮತ್ತು ವಿಜಯಲಕ್ಷ್ಮಿ ಚಾರಿಟಬಲ್ ಟ್ರಸ್ಟ್ನ ಅದ್ಯಕ್ಷ ರವಿಕುಮಾರ್ ಅವರ ಅಭಿಮಾನಿಗಳು ತಾಲೂಕಿನ ವಿವಿದ ಗ್ರಾಮದಲ್ಲಿ ಕ್ವಾರೈಂಟೈನ್ನಲ್ಲಿರುವವರಿಗೆ ದಿನಬಳಕೆಯ ವಸ್ತುಗಳು, ಜೊತೆಗೆ ಊಟ ಹಾಗೂ ಉಪಹಾರದ ಸಾಮಗ್ರಿಗಳು, ತರಕಾರಿ ಹಾಗೂ ಮಕ್ಕಳಿಗೆ ಬಿಸ್ಕೇಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.ವಿತರಣೆಯ ಸಮಯದಲ್ಲಿ ರವಿ ಕುಮಾರ್ ಮಾತನಾಡಿ, ಜನರು ಕೊರೊನಾಗೆ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಿಕೊಂಡು ಹೋಗಿ, ಊರಿನ ಸಮಸ್ಯೆ ಏನೇ ಇದ್ದರು ಅದನ್ನು ಬಗೆಹರಿಸಲು ಸದಾ ನಾವು ಸಿದ್ಧರಿದ್ದೆವೆ.ತಾಲ್ಲೂಕಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಲು ಸಿದ್ದರಿದ್ದೇವೆ ಎಂದರು.
ಶ್ರೀಮಂತ್ ಎಕ್ಸ್ ಪ್ರೆಸ್ಸ್ ಟಿವಿ