ಬೆಂಗಳೂರು

ನಾಗಮಂಡಲ ನಟಿಗೆ ಕಂಟಕ..!!

Published

on

ಬೆಂಗಳೂರು: ‘ನಾಗಮಂಡಲ’ ಚಿತ್ರದ ಖ್ಯಾತಿಯ ನಟಿ ವಿಜಯಲಕ್ಷ್ಮೀ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ನಟಿ, ತಮಿಳು ನಟ ಸೀಮಾನ್ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಆತ್ಮಹತ್ಯೆ ಪ್ರಯತ್ನಕ್ಕೂ ಮೊದಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವಿಜಯಲಕ್ಷ್ಮೀ ‘ಇದು ನನ್ನ ಕೊನೆಯ ವಿಡಿಯೋವಾಗಲಿದೆ. ಕಳೆದ ನಾಲ್ಕು ತಿಂಗಳಿನಿಂದ ನನ್ನನ್ನು ಸೀಮಾನ್ ಮತ್ತು ಆತನ ಪಕ್ಷ ಬದುಕಲು ಬಿಡುತ್ತಿಲ್ಲ. ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾನೆ. ನನ್ನ ಸಾವಿಗೆ ಸೀಮಾನ್ ಕಾರಣ. ಆತನನ್ನು ಸುಮ್ಮನೇ ಬಿಡಬೇಡಿ. ನಾನು ಈಗಾಗಲೇ ಎರಡು ಮಾತ್ರೆ ಸೇವಿಸಿದ್ದೇನೆ. ನನ್ನ ಸಾವಿಗೆ ಕಾರಣವಾದವರನ್ನು ಸುಮ್ಮನೇ ಬಿಡಬೇಡಿ’ ಎಂದು ವಿಡಿಯೋದಲ್ಲಿ ಹೇಳಿದ್ದರು. ಇದೀಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಅಶ್ವಿನಿ ಭಟ್ ಎಕ್ಸ್ ಪ್ರೆಸ್ಸ್ ಟಿವಿ ಬೆಂಗಳೂರು

Click to comment

Trending

Exit mobile version