ಬೆಂಗಳೂರು

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಓರ್ವ ಸೋಕಿತ ಸಾವು

Published

on

ಬೆಂಗಳೂರು: ಹೊಸರೋಡಿನ ಕರ್ನಾಟಕ ಬ್ಯಾಂಕ್ ಬಳಿ ವಾಸವಿದ್ದ 36 ವರ್ಷದ ವ್ಯಕ್ತಿ ಕೊರೊನಾ ಸೋಂಕಿಗೆ ಇಂದು ಮೃತ ಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಹೊಸರೋಡು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು.ನಿನ್ನೆ ಕೋವಿಡ್ ಪಾಸಿಟೀವ್ ಬಂದಿದ್ದು, ಸ್ವತಃ ಅಧಿಕಾರಿಗಳೇ ಕರೆ ಮಾಡಿ ಕೋವಿಡ್ ಖಚಿತವಾಗಿದೆ ಎಂದು ತಿಳಿಸಿದ್ದರು. ಆದರೆ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಗೆ ಸೋಂಕಿತನನ್ನು ಕರೆದುಕೊಂಡು ಹೋಗಿರಲಿಲ್ಲ. ನಿನ್ನೆ ರಾತ್ರಿ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿದ್ದು,ಕುಟುಬಸ್ಥರು ಎಷ್ಟು ಬಾರಿ ಅಧಿಕಾರಿಗಳಿಗೆ ಹಾಗು ಕಂಟ್ರೋಲ್ ನಂಬರ್ ಗೆ ಕರೆಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ 9 ಗಂಟೆಗೆ ಸೋಂಕಿತ ಮೃತಪಟ್ಟಿದ್ದು, ಆತ ಮೃತಪಟ್ಟರು ಸಹ ಬೆಳಗ್ಗೆ 10 ಗಂಟೆವರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಇರುವುದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

Click to comment

Trending

Exit mobile version