ಕೊರೋನಾ ಕಾಲದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹಾಲಿಡೇಸ್ ನ ಹೆಚ್ಚಾಗಿ ಅವರ ಫಾರ್ಮ್ ಹೌಸ್ ನಲ್ಲಿ ಪ್ರಾಣಿ-ಪಕ್ಷಿ ಹಾರೈಕೆಯಲ್ಲೇ ಕಳೆಯುತ್ತಿದ್ದಾರೆ. ಇದರಿಂದಾನೆ ಗೊತ್ತಾಗತ್ತೆ ಅವರಿಗೆ ಪ್ರಾಣಿಗಳು ಹಾಗೂ ಅರಣ್ಯ ಎಂದರೆ ಎಷ್ಟು ಪ್ರೀತಿ ಅಂತಾ. ತಮಗೆ ಸಮಯ ಸಿಕ್ಕಾಗಲೆಲ್ಲಾ, ಸ್ನೇಹಿತರೊಡನೆ ಕಾಡಿನ ಪ್ರದೇಶಗಳಿಗೆ ಹೋಗಿ ಪ್ರಾಣಿಗಳನ್ನು ನೋಡಿಕೊಂಡು, ಫೋಟೋ ತೆಗೆದುಕೊಂಡು ಬರುತ್ತಾರೆ. ಇನ್ನು ನಮಗೆಲ್ಲ ತಿಳಿದಿರುವ ಹಾಗೆ ನಟ ದರ್ಶನ್ ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಕೂಡ ಹೌದು.ಇತ್ತೀಚಿಗೆ ದರ್ಶನ್ ಅವರು ದೊಡ್ಡಮ್ಮಕಲಿಯಲ್ಲಿನ ಎಪಿಸಿ ಕ್ಯಾಂಪ್ ಗೆ ಹಾಸ್ಯನಟ ಚಿಕ್ಕಣ್ಣ ಅವರೊಂದಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಸಿಬ್ಬಂದಿಗಳ ಜೊತೆ ಮಾತನಾಡಿ ಗಿಡ ನೆಟ್ಟು ಕೆಲ ಕಾಲ ಅಲ್ಲೆ ಸಮಯ ಕಳೆದಿದ್ದಾರೆ.
ಅಶ್ವಿನಿ, ಎಕ್ಸ್ ಪ್ರೆಸ್ ಟಿವಿ, ಬೆಂಗಳೂರು