ಬಂಗಾರಪೇಟೆ: ಬಂಗಾರಪೇಟೆ ತಾಲ್ಲೂಕಿನ ರೈತರ,ಹಾಗೂ ಜನರ ಬಹು ದಿನಗಳ ಕನಸು ಕೆ ಸಿ ವ್ಯಾಲಿ ನೀರು ತಾಲ್ಲೂಕಿನ ಹಂಚಾಳ ಕೆರೆಗೆ ಹರಿಯುವ ಮೂಲಕ ನನಸಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹರ್ಷ ವ್ಯಕ್ತ ಪಡಿಸಿದರು. ನೀರಿಗೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬಾಗಿನ ಅರ್ಪಿಸಿ ಮಾತನಾಡಿ ಅಂದಿನ ಸಿದ್ದರಾಮಯ್ಯ ಸರಕಾರ ಬೆಂಗಳೂರಿನ ತ್ಯಾಜ ನೀರನ್ನು ಸಂಸ್ಕರಿಸಿ ಸದಾ ಬರಗಾಲದಿಂದ ತ್ತತರಿಸುತ್ತಿದ್ದ ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೆರೆಗಳಿಗೆ ಹರಿಸಿ ಅಂತರ್ಜಲವನ್ನು ವೃದ್ದಿಸಲು 1400 ಕೋಟಿ ಹಣ ಮಂಜೂರು ಮಾಡಿದ ಪರಿಣಾಮ ಇಂದು ನಮ್ಮ ತಾಲ್ಲೂಕಿನ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಹರಿದು ಬಂದಿದೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಮ್ಮ ಜಿಲ್ಲೆಯ ಎಲ್ಲಾ ಶಾಸಕರನ್ನು ಒಟ್ಟು ಗೂಡಿಸಿ ಕೆ.ಸಿ ವ್ಯಾಲಿ ನೀರು ಕೋಲಾರ ಜಿಲ್ಲೆಗೆ ಹರಿಯಲು ಬಹಳ ಶ್ರಮಿಸಿದರು. ಕಳೆದ ಒಂದು ವರ್ಷಗಳ ಹಿಂದೆ ನಾನು ಕೆ ಸಿ ವ್ಯಾಲಿ ನೀರು ಬಂಗಾರಪೇಟೆ ಕೆರೆಗಳಿಗೆ ಆದಷ್ಟು ಬೇಗ ಹರಿಯಲಿದೆ ಎಂದು ಹೇಳಿದಾಗ ನನ್ನ ವಿರುದ್ದ ಅಪಹಾಸ್ಯ ಮಾಡುವ ಹೇಳಿಕೆಗಳನ್ನು ನೀಡಿದರು ಅವರು ಅಂದು ಮಾಡಿದ ಅಪಹಾಸ್ಯಕ್ಕೆ ಇಂದು ನಾನು ಉತ್ತರ ಕೊಟ್ಟಂತಾಗಿದೆ. ಕೆಸಿ ವ್ಯಾಲಿ ನೀರು ತಾಲ್ಲೂಕಿಗೆ ಹರಿಯುವ ಮೂಲಕ ನಾನು ಶಾಸಕನಾದ ಮೇಲೆ ದೊಡ್ಡ ಸಾಧನೆ ಮಾಡಿದಂತೆ ಸಂತೋಷವಾಗಿದೆ ಯಾಕಂದ್ರೆ ಈ ಮೊದಲು ತಾಲ್ಲೂಕಿನ ರೈತರು 1200- 300 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆದರು ನೀರು ಸಿಗುತ್ತಿರಲಿಲ್ಲ ರೈತರು ಬಹಳಷ್ಟು ಕಷ್ಟ ಪಡುತ್ತಿದ್ದರು ಕೆಸಿ ವ್ಯಾಲಿ ನೀರು ಹರಿಯುವ ಮೂಲಕ ರೈತರ ಕಷ್ಡ ದೂರವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ