ಆನೇಕಲ್: ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಶಾಸಕ.ಬಿ.ಶಿವಣ್ಣ 18 ದಿನದಿಂದ ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾಗೆ ಹೆದರಿ ಅದೆಷ್ಟೋ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ ಅಂತಹವರಿಗೆ ಶಾಸಕ ಶಿವಣ್ಣ ಕಿವಿಮಾತು ಹೇಳಿದ್ದಾರೆ.ಕೊರೊನಾ ಪಾಸಿಟೀವ್ ಬಂದಾಕ್ಷಣ ನಾನು ಯಾವುದೇ ಭಯಪಟ್ಟಿಲ್ಲ ಧೈರ್ಯವಾಗಿದ್ದುಕೊಂಡ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾರು ಕೂಡ ಕೊರೊನಾ ಬಂದಾಗ ಭಯಪಡದೆ ದೈರ್ಯವಾಗಿರಿ, ವೈದ್ಯರು ಹೇಳಿದಂತೆ ಮನೆಯಲ್ಲಿ ಇರಬೇಕು.ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಬಿಸಿ ನೀರು, ಬಿಸಿ ಊಟ ಸೇವಿಸಿ,ಆಗಾಗ ಕೈ ತೊಳೆದುಕೊಂಡರೆ ಕೊರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಆನೇಕಲ್ ತಾಲ್ಲೂಕಿನ ಜನತೆ ಭಯಪಡುವ ಅಗತ್ಯವಿಲ್ಲ. ಮಾಧ್ಯಮದವರು ಜನರಿಗೆ ದೈರ್ಯ ತುಂಬುವ ಸುದ್ದಿಗಳನ್ನು ನೀಡಿ ಎಂದು ಮನವಿ ಮಾಡಿ ಜನರಿಗೆ ತಮ್ಮ ಮಾತುಗಳಿಂದ ಧೈರ್ಯ ತುಂಬಿದರು..
ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ