ಆನೇಕಲ್ : ಹಳೇ ವೈಷಮ್ಯದ ಹಿನ್ನೆಲೆ ಆನೇಕಲ್ ತಾಲ್ಲೂಕಿನ ಬೆಸ್ತಮಾನಹಳ್ಳಿ ಮೂಲದ ಸುನಿಲ್ ಎಂಬಾತನನ್ನು ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿ ನಡೆದಿದೆ. ಕಾರಿನಲ್ಲಿ ಬಂದಂತಹ 5 ಮಂದಿ ದುಷ್ಕರ್ಮಿಗಳಿಂದ ಕೃತ್ಯ ನಡೆದಿದ್ದು, ಸುನೀಲ್ ಈ ಹಿಂದೆ ಹೊಸಕೋಟೆ ಮೂಲದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಪರಾರಾಗಿದ್ದ,ಇತ ಫೀಲ್ಡ್ ನಲ್ಲಿ ಹೆಸರು ಮಾಡಲು ಹೊರಟಿದ್ದು, ಆನೇಕಲ್, ಅತ್ತಿಬೆಲೆ ಸೇರಿದಂತೆ ಹಲವು ಪ್ರಕರಣಗಳ ರೌಡಿ ಶೀಟರ್ ನಲ್ಲಿ ಇತನ ಹೆಸರಿದೆ. ಇನ್ನೂ ಕೊಲೆ ನಡೆದ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.