ಬಳ್ಳಾರಿ: ಇಷ್ಟು ದಿನ ಕೊರೊನಾ ಸೊಂಕಿನಿಂದ ಬಳಲುತ್ತಿದ್ದವರಿಗೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗ್ತಾಯಿಲ್ಲ ಅಂತ ಕೇಳ್ತಾಯಿದ್ವಿ, ಆದರೆ ಇದೀಗ ಸಾಮಾನ್ಯ ಖಾಯಿಲೆಗೂ ವೆಂಟಿಲೇಟರ್, ಬೆಡ್ ಸಿಗದಂತಾಗಿದೆ. ನಿನ್ನೆ ಇದ್ದಕ್ಕಿದಂತೆ ಕೊರೊನಾ ವಾರಿಯರ್ ಮನೆ ಸರ್ವೇ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾಋಎ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೇ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಗೂ ಬೆಡ್ ನ ಕೊರತೆ ಇದ್ದಿದ್ದರಿಂದ ವ್ಯಕ್ತಿ ಬಳ್ಳಾರಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ವತಃ ಬಳ್ಳಾರಿ ಡಿಹೆಚ್ಒ ಡಾ.ಜನಾರ್ದನ ಸ್ಪಷ್ಟ ಪಡಿಸಿದ್ದು ಕೂಡಲೇ ಸರ್ಕಾರ ಇದರ ಬಗ್ಗೆ ಮುತುವರ್ಜಿವಹಿಸಬೇಕೆಂದು ತಿಳಿಸಿದ್ದಾರೆ.
ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು