ಬೆಂಗಳೂರು

ನೂತನ ಪೋಲಿಸ್ ಆಯುಕ್ತರಾಗಿ ಪಂತ್ ಆಯ್ಕೆ…ಅಧಿಕಾರ ಹಸ್ತಾಂತರಿಸಿದ ಭಾಸ್ಕರ್ ರಾವ್..!

Published

on

ಬೆಂಗಳೂರು : ಇಂದು ನಗರದ 36 ನೇ ಆಯುಕ್ತರಾಗಿ ಕಮಲ್ ಪಂತ್ ಆಯ್ಕೆಯಾಗಿದ್ದು, ನಿರ್ಗಮಿತ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಪಂತ್ ಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಅಧಿಕಾರ ಹಸ್ತಾಂತರದ ಬಳಿಕ ಮಾತನಾಡಿದ ನೂತನ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ನಾನು ಬೆಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿದ್ದೇನೆ. ಸರ್ಕಾರ ನೀಡಿದ ಜವಾಬ್ದಾರಿಯನ್ನ ನಿಷ್ಟೆಯಿಂದ ಮಾಡುತ್ತೇನೆ, ಮಹಿಳೆಯರು, ಮಕ್ಕಳು ಹಾಗು ವೃದ್ಧರ ರಕ್ಷಣೆ ನಮ್ಮ ಮೇಲೆ ಇದೆ. ಅಲ್ಲದೇ ಸೈಬರ್ ಕ್ರೈಂ, ಮಾದಕ ವಸ್ತು ಮಾರಾಟ ಮತ್ತು ರೌಡಿಗಳ ಮೇಲೆ ನಿಗಾ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version