ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಿಂದ ನಾನು ದೂರ ಉಳಿಯುತ್ತೇನೆ ಎಂದು ಮಾಜಿ ಸಿಎಂ ಉಮಾ ಭಾರತಿ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಉಳಿಯಲು ನಾನು ನಿರ್ಧಾರ ಮಾಡಿದ್ದೇನೆ. ಇಂದು ಭೋಪಾಲ್ನಿಂದ ಹೊರಟು ನಾಳೆ ಸಂಜೆ ವೇಳೆಗೆ ನಾನು ಅಯೋಧ್ಯೆ ಸೇರುತ್ತೇನೆ. ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸುವ ಸಾಧ್ಯತೆ ಇದ್ದು, ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಪ್ರಧಾನಿ ಕಾರ್ಯಕ್ರಮದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯಬಾರದು. ಹೀಗಾಗಿ ನಾನು ಮನೆಯಲ್ಲೇ ಇದ್ದು ಕಾರ್ಯಕ್ರಮ ನೋಡುತ್ತೇನೆ ಎಂದು ಟ್ವಿಟರ್ ಮುಖಾಂತರ ತಿಳಿಸಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿದ ದೆಹಲಿಗೆ ಹೊರಟ ಬಳಿಕ ನಾನು ರಾಮ ಮಂದಿರ ಬಳಿ ತೆರಳುತ್ತೇನೆ. ಸರಯೂ ನದಿ ತಟದಲ್ಲಿ ವಿಹರಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು