Uncategorized

ದತ್ತಾತ್ರೇಯ ದೇವಸ್ಥಾನಕ್ಕೆ ರಾಜ್ಯ ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿಕೆಶಿ ಭೇಟಿ..!

Published

on

ಅಫಜಲಪುರ: ತಾಲ್ಲೂಕಿನ ಸುಕ್ಷೇತ್ರ ದತ್ತಾತ್ರೇಯ ದೇವಸ್ಥಾನಕ್ಕೆ ರಾಜ್ಯ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿಕೆ ಶಿವುಕುಮಾರ ಅವರು ಪ್ರಪ್ರಥಮ ಬಾರಿಗೆ ಆಗಮಿಸಿ ದತ್ತ ಮಹಾರಾಜರ ದರ್ಶನ ಪಡೆದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ದತ್ತ ದೇವಸ್ಥಾನ ಬಹಳ ಪವಿತ್ರವಾದ ಸ್ಥಳವಾಗಿದೆ.ಈ ಹಿಂದೆಯೂ ಕೂಡ ಬಂದು ದೇವರ ದರ್ಶನ ಪಡೆದಿದ್ದೇನೆ. ನನಗೆ ದೇವರು ಎಲ್ಲಾ ಒಳ್ಳೆಯದು ಮಾಡಿದ್ದಾನೆ.ಅದೇ ರೀತಿ ರಾಜ್ಯದ ಜನತೆಯ ಆರೋಗ್ಯ ಭಾಗ್ಯ ದೇವರು ಕಾಪಾಡಲಿ.ಕೊರಾನಾ ಮಹಾಮಾರಿ ರೋಗ ನಾಶವಾಗಲಿ. ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೊರಾನಾದಿಂದ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಡಿಕೆಶಿ ತಿಳಿಸಿದರು.ಇನ್ನೂ ಈ ಸಂದರ್ಭದಲ್ಲಿ ಶಾಸಕರಾದ ಪ್ರೀಯಾಂಕ್ ಖರ್ಗೆ,ಎಂ.ವಾಯ್.ಪಾಟೀಲ್. ಅಜಯಸಿಂಗ್ ಮತ್ತು ಅಲ್ಲಂ ಪ್ರಭು ಪಾಟೀಲ್,ಡಾ.ಶರಣಪ್ರಕಾಶ್ ಪಾಟೀಲ್ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್, ಸಮಾಜ ಸೇವಕ ಜೆ.ಎಂ.ಕೊರಬು, ಪಕ್ಷದ ಮುಖಂಡರು, ಕಾರ್ಯಕರ್ತರು,ಅಭಿಮಾನಿಗಳು,ಅರ್ಚಕರು ಸೇರಿದಂತೆ ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು.

ವರದಿ: ಈರಣ್ಣ ಎಂ.ವಗ್ಗೆ ವರದಿಗಾರರು ಅಫಜಲಪುರ

Click to comment

Trending

Exit mobile version