ಮಂಡ್ಯ

ಮೋದಿ ಸರ್ಕಾರದ ಎರಡು ವರ್ಷದ ಸಾಧನೆಯ ಕರಪತ್ರ ವಿತರಣೆ, ಹಾಗೂ ಹಾಲು ಮಾರಾಟಗಾರರಿಗೆ ಮಾಸ್ಕ್ ವಿತರಣೆ..!

Published

on

ಮಳವಳ್ಳಿ: ಭಾರತೀಯ ಜನತಾ ಪಾರ್ಟಿ ಹಾಗೂ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ವತಿಯಿಂದ ಹಾಲು ಮಾರಾಟಗಾರರು ಹಾಗೂ ಕೊಳ್ಳುವವರಿಗೆ ಮಾಸ್ಕ್ ವಿತರಣಾ ಹಾಗೂ ಕೇಂದ್ರ ದ ಬಿಜೆಪಿ ಪಕ್ಷದ ಎರಡು ವರ್ಷದ ಸಾಧನೆಯ ಕರಪತ್ರ ವಿತರಣಾ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ನಡೆಸಲಾಯಿತು.ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಯಮದೂರು ಸಿದ್ದರಾಜು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಮಾಸ್ಕ್ ವಿತರಣೆ ಮಾಡಲಾಯಿತು.ಬಳಿಕ ಮಾತನಾಡಿದ ಡಾ.ಯಮದೂರು ಸಿದ್ದರಾಜು ರವರು ವಿಶ್ವ ವ್ಯಾಪ್ತಿಯಲ್ಲಿ ಕೋರಾನಾ ಹೆಚ್ಚಾಗುತ್ತಿದ್ದು,ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಿದೆ.ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರವರು ಕೋವಿಡ್ 19 ನಿಯಂತ್ರಣ ಮಾಡಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ.ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಅದಕ್ಕಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದರು.ನಮ್ಮ ಜೀವ ಜೀವನ ನಮ್ಮ ಕೈಯಲ್ಲಿ ಎಂಬುದನ್ನು ಪ್ರತಿಯೊಬ್ಬ ತಿಳಿದುಕೊಂಡು ನಡೆಯಬೇಕು ಎಂದರು.ಮಳವಳ್ಳಿ ತಾಲ್ಲೂಕಿನಲ್ಲೂ ಕೋವಿಡ್ 19 ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಶಿವಲಿಂಗೇಗೌಡರು,ತಳಗವಾದಿ ಬಡ್ಡಿಹನುಮಂತು,ಚಿಕ್ಕಣ್ಣ, ಹುಚ್ಚೇಗೌಡ, ಜಯಮ್ಮ, ಆಶೋಕ ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ : ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version