ಆನೇಕಲ್ : ದೇಶದೆಲ್ಲೇಡೆ ರಾಮಮಂದಿರದ ಭೂ ಪೂಜೆಗೆ ಅದ್ದೂರಿ ಪ್ರತಿಕ್ರಿಯೆ ದೊರೆಯುತ್ತಿದೆ. ಅದೇ ರೀತಿ ಎಲ್ಲೆಡೆ ರಾಮ ಟ್ರಸ್ಟ್ ಬಿಜೆಪಿ ಆರ್ ಎಸ್ ಎಸ್ ಸೇರಿದಂತೆ ಇನ್ನು ಹಲವು ಹಿಂದೂ ಪರ ಸಂಘಟನೆಗಳ ಹೋರಾಟಗಾರರು ರಾಮಮಂದಿರ ಭೂ ಪೂಜೆ ವಿಷೇಶವಾಗಿ ತಮ್ಮ ತಮ್ಮ ಸ್ಥಳಗಳಲ್ಲಿ ಸಂಭ್ರಮಾಚರಣೆಗಳನ್ನು ನಡೆಸುತ್ತಿದ್ದಾರೆ.ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಪಟ್ಟಣದ ರಾಮ ದೇವಾಲಯದಲ್ಲಿ ವಿಷೇಶವಾದ ಪೂಜೆ ಹಾಗು ಅಭಿಷೇಕವನ್ನು ಹಮ್ಮಿಕೊಂಡು ರಾಮ ಮಂದಿರ ನಿರ್ಮಾಣ ಕ್ಕೆ ಪ್ರೇರೇಪಿಸಲಾಯಿತು.ಇದೇ ಸಮಯದಲ್ಲಿ ಮಾಜಿ ಸಚಿವ ಹಾಗು ಹಾಲಿ ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಸಹ ಭಾಗವಹಿಸಿ ಶ್ರೀ ರಾಮ ದೇವಾಲಯದ ಪೂಜೆಯಲ್ಲಿ ಪಾಲ್ಗೊಂಡಿದ್ದು, ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡು ರಾಮಮಂದಿರ ಕಟ್ಟುವುದಾಗಿ ಘೋಷಣೆ ಕೂಗುತ್ತ ಸಂಭ್ರಮಿಸಿದರು.ಜೊತೆಗೆ ಆನೇಕಲ್ನ ಚೆನ್ನಕೇಶವ ದೇವಾಲಯದಲ್ಲಿಯೂ ಸಹ ಕಾರ್ಯಕರ್ತರು ಶ್ರೀ ರಾಮನ ಭಾವಚಿತ್ರವನ್ನು ದೇವಾಲಯದ ಸುತ್ತ ಮೆರವಣಿಗೆ ಮಾಡಿ ಸಂಭ್ರಮಿಸಿದರು.ಈ ಕುರಿತು ಮಾತನಾಡಿದ ಸಂಸದ ನಾರಾಯಣ ಸ್ವಾಮಿ ಇಂದು ಎರಡು ವಿಶೇಷಗಳಿವೆ ಸಾಮಾನ್ಯ ಕಾರ್ಯಕರ್ತನಾಗಿ ಮೋದಿ ಅಂದು ಅಡ್ವಾಣಿಯವರ ಜೊತೆ ಹೊರಾಟ ಮಾಡಿದ್ದರು, ಇದೀಗ ಅವರೇ ಪ್ರದಾನಿಯಾಗಿ ಮಂದಿರದ ಭೂಮಿ ಪೂಜೆ ಮಾಡುತ್ತೀರುವುದು ಹಾಗು ಆರ್ಟಿಕಲ್ 360 ರದ್ದಾಗಿ ಇಂದಿಗೆ ಒಂದು ವರ್ಷ ಕಳೆದಿದೆ.ಹಿಂದು ರಾಷ್ಟ್ರದ ಮುನ್ನುಡಿ ಬರೆದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು. ಮುಸಲ್ಮಾನರ ವಿರೋಧದ ನಡುವೆಯೇ ನಾವು ಇಂದು ಹಿಂದೂ ರಾಷ್ಟ್ರದ ಮುನ್ನುಡಿಯನ್ನು ಬರೆಯುತ್ತಿದ್ದೇವೆ, ಅದಕ್ಕೆ ಯಾವುದೇ ಕಲ್ಪನೆ ಬರಲಿ, ರಾಮರಾಜ್ಯವನ್ನು ಕೊಡುತ್ತೇವೆಂಬುದರ ಸಂಕೇತವೇ ಇಂದಿನ ಶಿಲಾನ್ಯಾಸ, ಎಂದು ತಿಳಿಸಿದರು.
ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್..