ಬಾಗಲಕೋಟೆ

ಜಮಖಂಡಿ ಕುವರನ ಸಾಧನೆಗೆ ಹರಿದು ಬರುತ್ತಿದೆ ಅಭಿನಂದನೆಯ ಮಹಾಪೂರ..!

Published

on

ಬಾಗಲಕೋಟೆ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ.ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಪೆಂಡಾಲ್ ಗುತ್ತಿಗೆದಾರ ವಿರೇಶ್ ಕಲಾದಗಿ ಮಗ ಆನಂದ್ ಕಲಾದಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ 446 ರ್ಯಾಂಖ್ ಪಡೆಯುವ ಮೂಲಕ ರಾಜ್ಯ ಹಾಗೂ ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ. ವಿರೇಶ್ ಕಲಾದಗಿ ಜಮಖಂಡಿ ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳಿಗೆ ಪೆಂಡಾಲ್ ಗುತ್ತಿಗೆ ಕಾರ್ಯ ಮಾಡುತ್ತಾ ಜೀವನ ಸಾಗಿಸುತ್ತಿದ್ದು,ಸಾಮಾನ್ಯ ಪೆಂಡಾಲ್ ಗುತ್ತಿಗೆದಾರನ ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದು ಜಿಲ್ಲೆಯ ಜನತೆಗೆ ಹೆಮ್ಮೆ, ಸ್ಪೂರ್ತಿ ತಂದಂತಾಗಿದೆ.

ವರದಿ: ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Click to comment

Trending

Exit mobile version