ಬಳ್ಳಾರಿ : ಡಿ.ಜಿ ಹಳ್ಳಿ ಹಾಗು ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ೮೯ ಮಂದಿ ಆರೋಪಿಯನ್ನ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಬರಲಾಗಿದ್ದು, ಕೆಎಸ್ರ್ಟಿಸಿ ಮೂಲಕ ಆರೋಪಿಗಳನ್ನ ಪೊಲೀಸ್ ಭದ್ರತೆಯಲ್ಲಿ ಕರೆತರಲಾಗಿದೆ. ಕಾರಾಗೃಹಕ್ಕೆ ಕರೆತರುವ ಮುನ್ನ ಎಲ್ಲಾ ಆರೋಪಿಗಳಿಗೆ ಕೋರೊನಾ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಎಲ್ಲಾ ಆರೋಪಿಗಳ ವರದಿ ನೆಗೆಟಿವ್ ಬಂದಿದ್ದು, ಮೂರು ಕೆಎಸ್ರ್ಟಿಸಿ ಬಸ್ ಮೂಲಕ ಆರೋಪಿಗಳನ್ನು ಬಳ್ಳಾರಿಗೆ ಕರೆತರಲಾಗಿದೆ.