ರಾಯಚೂರು: ಶ್ರೀ ನಿವಾಸ ನಾಯಕ ಫೌಂಡೇಷನ್ ವತಿಯಿಂದ ಇಂದು ದ್ವೀತಿಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು. ನಗರದ ಗ್ರೀನ್ ಪ್ಯಾಲೇಸ್ ಆವರಣದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಗೊಲಪಲ್ಲಿ ವಾಲ್ಮೀಕಿ ಪೀಠದ ಶ್ರೀವರದಾನಂದ ಸ್ವಾಮಿಗಳು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು.ಸುಮಾರು100 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು ಪ್ರಥಮ ಸ್ಥಾನ ಪಡೆದ 10ವಿದ್ಯಾರ್ಥಿಗಳಿಗೆ ತಲಾ 5000 ಸಾವಿರ ಪ್ರೋತ್ಸಾಹ ದನ ನೀಡಿ ಗೌರವಿಸಲಾಯಿತು.ವಿಶೇಷವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆಗೈದಿರುವ ವಿಕಲಚೇತನ ಶಿವಪ್ಪ ಯರಗುಡ್ಡ ಅವರನ್ನು ಸನ್ಮಾನಿಸಿ 5000ಸಾವಿರ ಪ್ರೋತ್ಸಾಹ ದನ ನೀಡಲಾಯಿತು.ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಫೌಂಡೇಷನ್ ಮುಖ್ಯಸ್ಥರಾದ ಶ್ರೀಮತಿ ರೂಪಾ ಶ್ರೀನಿವಾಸ ನಾಯಕ,ಗಿರಿದರ್ ಪೂಜಾರ್,ಡಾ.ಸಂದೀಪ್ ಪಾಟೀಲ್, ಭೀಮನಗೌಡ ಪಾಟೀಲ್, ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿ ವಿ ರಾಯಚೂರು ಜಿಲ್ಲೆ