ಸಿಂಧನೂರು: ಸರ್ಕಾರದ ನಿಯಮಾವಳಿಗಳ ಅನುಸಾರ ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಸಿಂಧನೂರು ಉಪ ವಿಭಾಗದ ಡಿ.ವೈ.ಎಸ್. ಪಿ. ವಿಶ್ವನಾಥ ರಾವ್ ಕುಲಕರ್ಣಿ ತಿಳಿಸಿದ್ದು, ನಗರದ ಎ.ಪಿ.ಎಮ್. ಸಿ. ಯಲ್ಲಿ ಇರುವ ನಗರ ಪೋಲಿಸ್ ಠಾಣೆ ಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ವಿವಿಧ ಪಕ್ಷದ ಮುಖಂಡರನ್ನು ಹಾಗೂ ಎಲ್ಲಾ ಗಣಪತಿ ಮಂಡಳಿಯ ಸದಸ್ಯರನ್ನು ಶಾಂತಿ ಸಭೆಯನ್ನು ಕರೆಯಲಾಗಿತ್ತು..ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೊರೋನ್ ವೈರಸ್ ಹರಡದಂತೆ ತಡೆಗಟ್ಟವ ಉದ್ದೇಶದಿಂದ ಸರ್ಕಾರವು ಈ ಗಣೇಶ ಹಬ್ಬವನ್ನು ಆಚರಣೆ ಮಾಡಲು ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಸರ್ಕಾರದ ನಿಯಮದಂತೆ ಎಲ್ಲರೂ
ಗಣೇಶ ಚತುರ್ಥಿ ದಿನ ಗಣಪತಿ ಪ್ರತಿಷ್ಠಾಪನೆ ಸಾರ್ವಜನಿಕ ಸ್ಥಳಗಳಲ್ಲಿ ಮಾಡದೆ.
ಸರ್ಕಾರದ ನಿಗಮದ ಪ್ರಕಾರ ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಬೇಕು.ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು….
ವರದಿ-ಸೈಯದ್ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು…