ಸಿಂಧನೂರು

ಸಿಲಿಂಡರ್ ಗ್ಯಾಸ್ ನಿಂದ ಬೆಂಕಿಗೆ ಆಹುತಿಯಾದ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಲಯನ್ಸ್ ಕ್ಲಬ್….!

Published

on

ಸಿಂಧನೂರ: ತಾಲ್ಲೂಕಿನ ‌ಮುಚ್ಚಳ ಕ್ಯಾಂಪಿನಲ್ಲಿ ಕಳೆದ ಕೆಲವು ದಿನಗಳಿಂದೆ ಬಡ ರೈತ ನ ಗುಡಿಸಲಿನಲ್ಲಿ ಹೊಲಕ್ಕೆ ಹೋದಾಗ ಸಿಲಿಂಡರ್ ಗ್ಯಾಸ್ ಬ್ಲಾಸ್ಟ್ ಆಗಿ ಸಂಪೂರ್ಣವಾಗಿ ಗುಡಿಸಲು ಸುಟ್ಟು ಪರಿಣಾಮವಾಗಿ ರೈತನ ಕುಟುಂಬವು ಸಂಕಟವನ್ನು ಅನುಭವಿಸಿದೆ.‌ಆ ರೈತನ ಕುಟುಂಬಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷ ಪದ್ಮ ನಾಯ್ಡು ಹುಟ್ಟು ಹಬ್ಬದ ಪ್ರಯುಕ್ತ ರೈತನ ಕುಟುಂಬಕ್ಕೆ ದಿನನಿತ್ಯ ಅಗತ್ಯ ವಸ್ತುಗಳನ್ನು ಕೊಡುವ ಮೂಲಕ ಹುಟ್ಟ ಹಬ್ಬವನ್ನು ಆಚರಣೆ ಮಾಡಿ ಕೊಳ್ಳಲಾಯಿತು. ಜೊತೆಗೆ ವೃದ್ಧ ಆಶ್ರಮಕ್ಕೆ ನಾಲ್ಕು ಪಾಕೇಟ್ ಅಕ್ಕಿಯನ್ನು ವಿತರಣೆ ಮಾಡಿದರು. ಈ ಕಾರ್ಯಕ್ಕೆ ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್ ಸಹಕಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರಭಾಕರ ಕುಲ್ಕರ್ಣಿ, ನಗರ ಸಭೆ ಸದಸ್ಯರಾದ ರಾಜಶೇಖರ್, ಜಗದೀಶ್ ಎಲ್ಐಸಿ ಶಿವ, ಗಂಗಾಧರ ಸುರೇಶ್, ವೆಂಕಟೇಶ್ ಉದ್ಬಾಳ, ಸ್ವಾಮಿ ವಿವೇಕಾನಂದ ವೇದಿಕೆ ಅಧ್ಯಕ್ಷ ಶ್ರೀನಿವಾಸ್, ಅಶೋಕ ನಲ್ಲಾ ಕವಿತಾ ಶ್ರೀನಿವಾಸ್, ಶ್ರೀನಿವಾಸ್ ಟಿ , ಸದಸ್ಯ ಅನುಶ್ರೀ, ಸೇರಿದಂತೆ ಇತರರೂ ಭಾಗವಹಿಸಿದರು.

ವರದಿ- ಸೈಯದ್ ಬಂದೇ ನವಾಜ್ ಎಕ್ಸ್‌ಪ್ರೆಸ್‌ ಟಿವಿ ಸಿಂಧನೂರು.

Click to comment

Trending

Exit mobile version