ವಿಜಯಪುರ: ಡ್ರೈನೇಜ್ ಕುಸಿದು ಪೌರಕಾರ್ಮಿಕ ಜೀವನ್ಮರಣದಲ್ಲಿ ಹೋರಾಟ ನಡೆಸುತ್ತೀರುವ ಘಟನೆ ವಿಜಯಪುರ ತಾಲ್ಲೂಕಿನ ಇಂಡಿ ಪಟ್ಟಣದ 18ನೇ ವಾರ್ಡ್ ನಲ್ಲಿ ನಡೆದಿದೆ. 42 ವರ್ಷದ ಪೌರ ಕಾರ್ಮಿಕ ಅಶೋಕ್ ಕಡಿಮನಿ ವಾರ್ಡ್ ನಂ.18 ರಲ್ಲಿ ಶುಚಿತ್ವ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದ್ದು, U.J.D. ಯವರ ಕಳೆಪೆ ಕಾಮಗಾರಿಯಿಂದ ಡ್ರೈನೇಜ್ ಕುಸಿದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಇನ್ನೂ ಅಸ್ವಸ್ಥಗೊಂಡಿರುವ ಅಶೋಕ್ ನನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಅಸ್ಪತ್ರೆಗೆ ರವಾನೆ ಮಾಡಿದ್ದು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಇಂಡಿ ನಗರ ಪೋಲಿಸ್ ಠಾಣೆಯ ಪೋಲಿಸರು ಬಂದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವರದಿ ಶಂಕರ್ ಜಮಾದರ್ ಎಕ್ಸ್ಪ್ರೆಸ್ ಟವಿ ಇಂಡಿ..