ಲಿಂಗಸೂಗೂರು

ಕೊರೋನ ಸಮಯದಲ್ಲೂ ಮಾನವೀಯತೆ ಮೆರೆದ ಪತ್ರಕರ್ತ ಶರಣಯ್ಯ ಒಡೆಯರ್..!

Published

on

ಲಿಂಗಸೂಗೂರು : ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಎಪಿಎಂಸಿ ಯಲ್ಲಿ ಕುರಿ ಮೇಕೆ ಸಂತೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಕುರಿ, ಮೇಕೆ ಖರೀದಿಸಲು ಸಂತೆಗೆ ತಾಯಿ, ಮಗ ಬಂದಿದ್ದರು. ಇದ್ದಕ್ಕಿದಂತೆ ಮಗ ಕುಸಿದು ಬಿದ್ದು ಒದ್ದಾಡತೊಡಗಿದ್ದ. ಸಂತೆಯಲ್ಲಿ ಸೇರಿದ್ದ ಜನರು ತಾಯಿ ಮಗನನ್ನು ಬಿಟ್ಟು ದೂರ ಸರಿದರು ತಾಯಿ ಜನರ ಸಹಾಯ ಕೇಳಿದರು ಕೂಡ ಯಾರು ಸಹಾಯಕ್ಕೆ ಮುಂದಾಗಲಿಲ್ಲ ವಿಷಯ ತಿಳಿದ ಪತ್ರಕರ್ತ ಶರಣಯ್ಯ ಒಡೆಯರ್ ಸ್ಥಳಕ್ಕೆ ಧಾವಿಸಿ ಕೊರೊನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿ ಇದ್ದರೂ ಕೂಡ ಯುವಕನನ್ನು ರಕ್ಷಿಸಿ ತಾಯಿಯ ಕೂಗಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದು ಇವರ ಕಾರ್ಯಕ್ಕೆ ಎಲ್ಲೇಡೆ ಪ್ರಶಂಶೆ ವ್ಯಕ್ತವಾಗುತ್ತಿದೆ.

ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು..

Click to comment

Trending

Exit mobile version