ವಿಜಯಪುರ

ಎಟಿಎಂ ಸೆಕ್ಯೂರಿಟಿಯ ಬರ್ಬರ ಹತ್ಯೆ.. !

Published

on

ಸಿಂಧಗಿ: ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆಗೈದು ಎಟಿಎಂ ಲೂಟಿ ಮಾಡಲು ಕಳ್ಳರು ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಸೆಕ್ಯೂರಿಟಿಯಾಗಿದ್ದ ಮದಬಾವಿ ತಾಂಡಾದ ನಿವಾಸಿಯಾದ 25 ವರ್ಷದ ರಾಹುಲ್ ರಾಠೋಡ ಎಂಬಾತನನ್ನು ಕಳ್ಳರು ಹತ್ಯೆಗೈದು ಕಳ್ಳತನ ಮಾಡಲು ಮುಂದಾಗಿದ್ದಾರೆ.ಎಟಿಎಂ ಒಳಗೆ ಲೂಟಿ ಮಾಡಲು ಕಾಲಿಡುತ್ತಿದ್ದಂತೆ ಸೈರನ್ ಶಬ್ಧವಾಗಿದ್ದು, ತಕ್ಷಣವೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ..

ವರದಿ-ಅಂಬರೀಶ್ ಎಸ್.ಎಸ್ ಎಕ್ಸ್ ಪ್ರೆಸ್ ಟಿವಿ ಸಿಂಧಗಿ..

Click to comment

Trending

Exit mobile version