ಮಳವಳ್ಳಿ: ರಾಜ್ಯವ್ಯಾಪ್ತಿ ವೀರಶೈವ ಸಂಘಟನೆಗಳು ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಶ್ರೀ ಶಂಕರಮಠ ಹಾಗೂ ತಾಲ್ಲೂಕು ವೀರಶೈವ ಸಮಾಜದ ವತಿಯಿಂದ. ಶ್ರೀ ವೀರಭದ್ರೇಶ್ವರ ಜಯಂತಿಯನ್ನುಮಳವಳ್ಳಿ ಪಟ್ಟಣದಲ್ಲಿ ಅಚರಣೆ ಮಾಡಲಾಯಿತು. ಮಳವಳ್ಳಿ ಪಟ್ಟಣದ ಶ್ರೀ ಶಂಕರಮಠದಲ್ಲಿ ಧನಗೂರು ಮಠ ವೀರಸಿಂಹಾಸನ ಮಠ, ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯರವರು ವೀರಭದ್ರೇಶ್ವರ ಭಾವ ಚಿತ್ರಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪೂರಿಗಾಲಿ ಮಠದ ಶಿವಾನಂದ ಶಿವಚಾರ್ಯ ಸ್ವಾಮೀಜಿರವರು ದಿವ್ಯ ಸಾನಿದ್ಯ ವಹಿಸಿದ್ದರು. ಇನ್ನೂ ಧನಗೂರು ಮಠ, ವೀರಸಿಂಹಾಸನ ಮಠದ ಮಠಾಧೀಶರು ಕೂಡ ಭಾಗವಹಿಸಿದ್ದರು.ಇನ್ನೂ ಕಾರ್ಯಕ್ರಮದಲ್ಲಿ ತಾಲ್ಲೂಕು ವೀರಶೈವ ಯುವ ಬಳಗದ ಅಧ್ಯಕ್ಷ. ಹೆಚ್.ಸಿ ಮಹೇಶ್,ಪರಶಿವಮೂರ್ತಿ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಸಿಇಓ ಬಿ ನಾಗರಾಜು, ಮಹದೇವಪ್ಪ, ಜಗದೀಶ್, ಬಸವಣ್ಣ ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.
ವರದಿ: ಎ.ಎನ್ ಲೋಕೇಶ್. ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ