ಶಹಾಪುರ :ಪ್ರಧಾನ ಮಂತ್ರಿ ಕಿಸಾನ್ ಖಾತೆಗೆ ಜಮಾವಾದ ಹಣ ಪಡೆಯಲು ಜನರು ಜನ ಜಂಗುಳಿಯಾಗಿ ಮುಗಿಬಿದ್ದಿರುವ ದೃಶ್ಯ ಶಹಾಪುರದ ಡಿಸಿಸಿ ಬ್ಯಾಂಕ್ ಮುಂದೆ ಕಂಡು ಬಂದಿತ್ತು.ಇಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಯಾರೊಬ್ಬ ರೈತರು ಮಾಸ್ಕ್ ಹಾಕಿಕೊಳ್ಳದೇ ಜನಜುಂಗುಳಿಯಾಗಿ ಮುಗಿದು ಬಿದ್ದಿರುವುದು ಸರಿಯಲ್ಲ ಇದೇ ರೀತಿ ಮುಂದುವರಿದರೆ ಶಹಾಪುರದಲ್ಲಿ ಕೊರೋನಾ ಮಹಾಮಾರಿ ತೀವ್ರಗತಿಯಲ್ಲಿ ಹರಡುವುದು ಅಷ್ಟೇ ಸತ್ಯ. ಬ್ಯಾಂಕ್ ಸಿಬ್ಬಂದಿಗಳು ಯಾವುದಾದರೂ ವ್ಯವಸ್ಥಿತ ಮಾಡಿ ಬರುವ ರೈತರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸುವಂತೆ ಸೂಚಿಸಬೇಕು ಕೊರೊನ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳು ಅನುಸರಿಸಬೇಕಾಗಿದೆ ಎಂದು ಕರಿಬಸಪ್ಪ ಬಿರಾಳ ತಿಳಿಸಿದ್ದಾರೆ.
ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ..