ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಯಾವುದೇ ಸಂಭ್ರಮ ಸಡಗರವಿಲ್ಲದೇ ನಗರದ ವಿವಿಧ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕರ ಮನೆಗಳಲ್ಲಿ ಪ್ರತಿಷ್ಟಾಪಿಸಲಾಗಿದ್ದ ಸುಮಾರು 200ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು. ಉಣಕಲ್,ಕಂಬಾರ ಸಾಲ,ಮೇದಾರ ಓಣಿ, ನವ ಆಯೋಧ್ಯನಗರ, ಹಿರೇಪೇಟ, ಗುಡಿ ಓಣಿ, ದಾಳಿಂಬರ ಪೇಟ, ಚನ್ನಪೇಟ, ಬಾಣತಿಕಟ್ಟಿ ಓಣಿ, ಕಾಳಿಕಾದೇವಸ್ಥಾನ,ಅಕ್ಕ ಸಾಲಿಗರ ಓಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪ್ರತಿಷ್ಟಾಪಿಸಲಾದ ಸಾರ್ವಜನಿಕ ಗಣಪತಿ ಮೂರ್ತಿಗಳ ವಿಸರ್ಜನೆ ನಿನ್ನೆ ನಡೆಯಿತು.ಯಾವುದೇ ವಿಶೇಷತೆ ಸಾರಿದರು ಮೆರವಣಿಗೆ ಉದ್ದಕ್ಕೂ ಗಣಪತಿ ಬಪ್ಪಾ ಮೋರಿಯಾ ಎಂಬ ಜಯ ಘೋಷಣೆ ಮಾತ್ರ ಕಡಿಮೆ ಇತ್ತು .ಗಣಪತಿ ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯಾ ಸಂಗೀತದ ಅಬ್ಬರ,ಕುಣಿತ ಯಾವುದು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಶಾಂತಿಯುತದಿಂದ ಹುಬ್ಬಳ್ಳಿಯ ಜನತೆ ಗಣಪತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದರು.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ..