ಬೆಂಗಳೂರು

ಆನಂದ್ ರಾವ್ ಫ್ಲೈ ಓವರ್‌ಗೆ ಸಂಗೂಳ್ಳಿ ರಾಯಣ್ಣನ ಹೆಸರು..!

Published

on

ಬೆಂಗಳೂರು: ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಆನಂದ್ ರಾವ್ ವೃತ್ತದ ಫ್ಲೈ ಓವರ್‌ಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮೇಲುಸೇತುವೆ ಎಂದು ನಾಮಕರಣ ಮಾಡಲಾಗಿದೆ.ಇಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊದಲು ರೈಲು ನಿಲ್ದಾಣದ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಬಳಿಕ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮೇಲುಸೇತುವೆ ಉದ್ಘಾಟಿಸಿದರು.ಫ್ಲೈ ಓವರ್‌ಗೆ ಇಷ್ಟು ದಿನ ನಾಮಕರಣ ಮಾಡಿರಲಿಲ್ಲ. ಆನಂದ್ ರಾವ್ ಸರ್ಕಲ್ ಫ್ಲೈ ಓವರ್ ಎಂದೇ ಕರೆಯಲಾಗುತ್ತಿತ್ತು. ಈಗ ಮೇಲು ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಇಡಲಾಗಿದ್ದು, ಈ ಫ್ಲೈ ಓವರ್ ನಿರ್ವಹಣೆಯನ್ನು ಬಿಬಿಎಂಪಿ ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Click to comment

Trending

Exit mobile version