ಮಳವಳ್ಳಿ: ಬಡಜನರಿಗೆ ಆಶ್ರಯ ಯೋಜನೆಯಡಿಯಲ್ಲಿ ನಿರ್ಗತಿಕರಿಗೆ ನಿವೇಶನ ಹಂಚುವ ಬದಲು ಖಾಸಗಿ ವಿದ್ಯಾಸಂಸ್ಥೆ ಗೆ ನೀಡಲು ಹೊರಟಿರುವುದನ್ನು ಖಂಡಿಸಿ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ ನೇತೃತ್ವದಲ್ಲಿ 15 ಕ್ಕೂ ಹೆಚ್ಚು ಮಂದಿ ಗ್ರಾಮದ ನಿರ್ಗತಿಕರು ತಾ.ಪಂ ಆಡಳಿತಾಧಿಕಾರಿಗಳ ವಿರುದ್ದ ಘೋಷಣೆ ಕೂಗಿದರುಕಳೆದ 50 ವರ್ಷಗಳಿಂದಲ್ಲೂ ವಾಸ ಮಾಡುತ್ತಿರುವ ನಮಗೆ ನಿವೇಶನ ಹಂಚದೆ ಖಾಸಗಿ ವಿದ್ಯಾಸಂಸ್ಥೆ ನಿವೇಶನ ನೀಡಲು ತಾ.ಪಂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ನಮಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದರು.ಇನ್ನೂ ತಾ.ಪಂಸದಸ್ಯ ಹಾಗೂ ಮಾಜಿ ವಿರೋಧಪಕ್ಷ ನಾಯಕ ಪುಟ್ಟಸ್ವಾಮಿ ಮಾತನಾಡಿ, ಆಶ್ರಯ ಯೋಜನೆಯಡಿಯ ನಿವೇಶನವನ್ನು ಖಾಸಗಿ ಸಂಸ್ಥೆಗೆ ನೀಡಲು ನನ್ನ ಗಮನಕ್ಕೂ ತರದೆ ಅನುಮೋದನೆ ನೀಡಿದ್ದಾರೆ.ಸುಮಾರು ಒಂದೂವರೆ ಕೋಟಿ ರೂ ವೆಚ್ಚ ಬೆಲೆಬಾಳುವ ನಿವೇಶನವನ್ನು ಖಾಸಗಿ ವಿದ್ಯಾಸಂಸ್ಥೆ ನೀಡುವ ಹಿಂದೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು. ನಂತರ ತಾ.ಪಂ ಇಓ ಸತೀಸ್ ರವರಿಗೆ ಮನವಿ ಸಲ್ಲಿಸಲಾಯಿತು .ಪ್ರತಿಭಟನೆಯಲ್ಲಿ ತಾ.ಪಂ ವಿರೋಧ ಪಕ್ಷ ನಾಯಕ ನಟೇಶ್, ಮಹೇಶ, ಸೇರಿದಂತೆ ಮತ್ತಿತ್ತರರು ಇದ್ದರು
ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ