ಮಳವಳ್ಳಿ: ಭಾರತೀಯ ಜನತಾ ಪಾರ್ಟಿ ಹಾಗೂ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ವತಿಯಿಂದ ಹಾಲು ಮಾರಾಟಗಾರರು ಹಾಗೂ ಕೊಳ್ಳುವವರಿಗೆ ಮಾಸ್ಕ್ ವಿತರಣಾ ಹಾಗೂ ಕೇಂದ್ರ ದ ಬಿಜೆಪಿ ಪಕ್ಷದ ಎರಡು ವರ್ಷದ ಸಾಧನೆಯ ಕರಪತ್ರ ವಿತರಣಾ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆಸಲಾಯಿತು.ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಯಮದೂರು ಸಿದ್ದರಾಜು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ಬಳಿಕ ಮಾತನಾಡಿದ ಡಾ.ಯಮದೂರು ಸಿದ್ದರಾಜು ರವರು ವಿಶ್ವ ವ್ಯಾಪ್ತಿಯಲ್ಲಿ ಕೋರಾನಾ ಹೆಚ್ಚಾಗುತ್ತಿದ್ದು, ದೇಶ ಹಾಗೂ ರಾಜ್ಯ ದಿನದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಪ್ರಧಾನಿ ಮೋದಿಜೀ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರವರು ಕೋವಿಡ್ 19 ನಿಯಂತ್ರಣ ಮಾಡಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಅದಕ್ಕಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದರು. ನಮ್ಮ ಜೀವ ಜೀವನ ನಮ್ಮ ಕೈಯಲ್ಲಿ ಎಂಬುದನ್ನು ಪ್ರತಿಯೊಬ್ಬ ತಿಳಿದುಕೊಂಡು ನಡೆಯಬೇಕು ಎಂದರು. ಮಳವಳ್ಳಿ ತಾಲ್ಲೂಕಿನಲ್ಲೂ ಕೋವಿಡ್ 19 ಹೆಚ್ಚಾಗುತ್ತಿದ್ದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಚಿಕ್ಕಬಾಗಿಲು ಮಠಾಧ್ಯಕ್ಷರಾದ ಶ್ರೀ ಶ್ರೀ ಶಿವಯೋಗಿ ಪಂಚಾಕ್ಷರಿ ಸ್ವಾಮೀಜೀ, ಬಿಜೆಪಿ ಹಿರಿಯ ಮುಖಂಡ ಶಿವಲಿಂಗೇಗೌಡರು, ಶಿವರಾಜ್ ಸಿದ್ದರಾಜು,ಚಿಕ್ಕಬಾಗಿಲು ಮುಖಂಡ ರಾಜೇಂದ್ರ, ಮಹದೇವಸ್ವಾಮಿ, ಮಹೇಶ್ ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು…!
ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ