ಶಿರಾ

ಪೊಲೀಸರ ಸಮಯಪ್ರಜ್ಞೆಯಿಂದ ಜೈಲು ಪಾಲಾದ ಕಳ್ಳರ ಗ್ಯಾಂಗ್…!

Published

on

ಶಿರಾ -ಅಮರಾಪುರ ರಸ್ತೆ ಮಧ್ಯಭಾಗ ಸಿಗುವಂತ ಹುಲಿಕುಂಟೆ ಗೇಟ್ ಬಳಿ ಕಾರು ಮತ್ತು ಬೈಕ್ ನಲ್ಲಿ ನಿಂತು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ 8.ಜನ ಕಳ್ಳರನ್ನು ಕಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಬಂಧಿಸಿದ್ದಾರೆ. ಕಾರಿನಲ್ಲಿ ಮಚ್ಚು-ಲಾಂಗು ಸೇರಿದಂತೆ ಕಾರದಪುಡಿ ಇಟ್ಟುಕೊಂಡಿದ್ದರು ಎನ್ನಲಾಗಿದ್ದು ಪೊಲೀಸರ ಸಮಯಪ್ರಜ್ಞೆಯಿಂದ ಕಳ್ಳತನ ತಪ್ಪಿದಂತಾಗಿದೆ. ಡಿವೈಎಸ್ಪಿ ಕುಮಾರಪ್ಪ ಹಾಗೂ ಶಿರಾ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಪಿಎಸ್ಐ ಧ್ರುವ ಚಾರ್ ನೇತೃತ್ವದಲ್ಲಿ ತನಿಖೆ ನಡೆಸಿದ್ದು ದೃಢವಾಗಿದ್ದು ಈ ಆರೋಪದ ಮೇಲೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳ ರಿಗೆ ಜೈಲುಪಾಲು ಮಾಡಿದ್ದಾರೆ. ಆರೋಪಿಗಳು ನೆಲಮಂಗಲ ಮೂಲದವರು ಎನ್ನಲಾಗಿದೆ.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Click to comment

Trending

Exit mobile version