ಮಂಡ್ಯ

ಕೆ.ಎಂ.ಎಫ್ ಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ವಿಶ್ವನಾಥ್ ಗೆ ಸನ್ಮಾನ…!

Published

on

ಮಳವಳ್ಳಿ: ಹಾಲು ಉತ್ಪಾಕರ ಸಹಕಾರ ಸಂಘವತಿಯಿಂದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿ (ಕೆ.ಎಂ.ಎಫ್) ಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಮನ್ ಮುಲ್ ನಿರ್ದೇಶಕ ವಡ್ಡರಹಳ್ಳಿ ವಿಶ್ವನಾಥ್ ರವರಿಗೆ ತವರಿನಲ್ಲಿ ಸನ್ಮಾನ ಸಮಾರಂಭವನ್ನು ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆಸಲಾಯಿತು. ವಡ್ಡರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಚೌಡಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಪುರಸಭೆ ಸದಸ್ಯ ವಡ್ಡರಹಳ್ಳಿ ಸಿದ್ದರಾಜು, ಪುರಸಭೆ ಸದಸ್ಯ ನಾಗೇಶ್, ನಾರಾಯಣ ಸೇರಿದಂತೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಸನ್ಮಾನಿಸಲಾಯಿತು. ಇನ್ನೂ ಸನ್ಮಾನ ಸ್ವೀಕರಿಸಿದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳಿ ನೂತನ ನಿರ್ದೇಶಕ ವಡ್ಡರಹಳ್ಳಿ ವಿಶ್ವನಾಥ್ ರವರು ಮಾತನಾಡಿ ರಾಜ್ಯದಲ್ಲಿ ಕೋವಿಡ್ 19 ನಿಂದ ಒಕ್ಕೂಟದಲ್ಲಿ ಸಾಕಷ್ಟು ತೊಂದರೆವಿದ್ದು,ಉತ್ಪಾದನೆಯಾದ ವಸ್ತುಗಳು ಮಾರಾಟವಾಗುತ್ತಿಲ್ಲ ಜೊತೆಗೆ ಮದುವೆ, ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ನಡೆಯದ ಕಾರಣ ಇದರಿಂದಹಾಲು ಉತ್ಪಾದಕರಿಗೆ ಸರಿಯಾಗಿ ಹಣ ವಿತರಣೆಯಾಗುತ್ತಿಲ್ಲ ಇದಕ್ಕೆ ಉತ್ಪಾದಕರು ಸಹಕಾರ ನೀಡಬೇಕು ಎಂದರು.ಇನ್ನೂ ಈ ಅಧಿಕಾರ ನೀಡಿದ ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರುಗಳು ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಅಭಿನಂದನೆ ಸಲ್ಲಿಸಿದರು. ಉತ್ತಮ ಗುಣಮಟ್ಟದ ಹಾಲನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ತಾಲ್ಲೂಕು ಮೊದಲ ಸ್ಥಾನ ಲಭಿಸಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷ ಚೌಡಯ್ಯ ,ಶಿವರುದ್ರಪ್ಪ,ನೂತನಕುಮಾರ್,ಶಿವಲಿಂಗೇಗೌಡ,ರಾಜಣ್ಣ, ರಾಜು,ಮಹದೇವಸ್ವಾಮಿ,ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version