ಮಳವಳ್ಳಿ: ನ್ಯೂ ಲೈಫ್ ಇಂಟರ್ ನ್ಯಾಷನಲ್ ಬೋರ್ಡಿಂಗ್ ಸ್ಕೂಲ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಭೋದನಾ ವಿನೂತನ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ನ್ಯೂ ಲೈಫ್ ಇಂಟರ್ ನ್ಯಾಷನಲ್ ಬೋರ್ಡಿಂಗ್ ಸ್ಕೂಲ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಪುಟ್ಟಸ್ವಾಮಿರವರು ಚಾಲನೆ ನೀಡಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಲದು,ಶಿಕ್ಷಕರು ಸಹ ಮಕ್ಕಳಿಗೆ ಹೇಗ ಶಿಕ್ಷಣವನ್ನು ಭೋದನೆ ಮಾಡಬೇಕು ಎಂದು ತಿಳಿದುಕೊಳ್ಳಬೇಕು ಅದಕ್ಕಾಗಿ ತಾಲ್ಲೂಕಿನ ವಿವಿದ ಶಾಲೆಯ ಶಿಕ್ಷಕರಿಗೆ ಭೋದನಾ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಿಂದ ಹಮ್ಮಿಕೊಂಡಿದ್ದೇವೆ ಎಂದರು.ಬೆಂಗಳೂರಿನ ಸಿಇಪಿ ಗೋಬೆಲ್ ಸಂಸ್ಥೆಯ ನವ್ಯಶ್ರೀ ಹಾಗೂ ಆನಂದ್ ರವರು ಶಿಕ್ಷಕರು ಮಕ್ಕಳಿಗೆ ಹೇಗೆ ಪಾಠ ಕಲಿಸಬೇಕು.ಅವರಿಗೆ ಯಾವ ರೀತಿ ಅರ್ಥವಾಗುತ್ತದೆ ಎನ್ನುವುದನ್ನು ಶಿಕ್ಷಕರುಗಳು ತಿಳಿದುಕೊಳ್ಳಬೇಕು ಎನ್ನುವ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲಾಯಿತು.ಇದೇ ತರಬೇತಿ ಪಡೆದ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ,ಉಪಾಧ್ಯಕ್ಷ ಪ್ರವೀಣ್ ,ಕಾರ್ಯದರ್ಶಿ ಗೋವಿಂದ್,ಖಜಾಂಚಿ ಸಿದ್ದೇಗೌಡ, ಸತೀಸ್, ದಶರಥ,ಜಯರಾಮು, ಸೋಮಣ್ಣ ,ಮಹೇಶ್, ಸೇರಿದಂತೆ ಮತ್ತಿತ್ತರರು ಇದ್ದರು.
ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ