ಶಿರಾ : ಹಿಂದುಳಿದ ವರ್ಗಗಳ ಮುಖಂಡ, ಯುವಕರ ಆಶಾಕಿರಣ ಡಿ ಟಿ ಶ್ರೀನಿವಾಸ್ ರವರಿಗೆ ಮುಂಬರುವ ಶಿರಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶವನ್ನು ನೀಡಬೇಕೆಂದು ತಾಲೂಕು ಡಿ.ಟಿ.ಶ್ರೀನಿವಾಸ್ ಅಭಿಮಾನಿ ಬಳಗದಿಂದ ಒತ್ತಾಯಿಸಿದ್ದಾರೆ.ನಗರದ ಹೊರ ವಲಯದಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಭೆ ಸೇರಿ ಮಾತನಾಡಿದ ಅಭಿಮಾನಿಗಳು ಶಿರಾ ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕು ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸದಾ ಅಭಿವೃದ್ಧಿಯ ಪರ ಚಿಂತಿಸುವ ಶ್ರೀನಿವಾಸ್ ಅವರಂತಹವರು ಸ್ಪರ್ಧಿಸುವ ಅವಶ್ಯಕತೆ ಇದೆ. ಶ್ರೀನಿವಾಸ್ ರವರು ಅತ್ಯಂತ ವಿದ್ಯಾವಂತರು ಹಾಗೂ ಕ್ರಿಯಾಶೀಲರಾಗಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ವ್ಯಕ್ತಿ ಆಗಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಡ ಮಂಗನಹಳ್ಳಿ ಮಂಜುನಾಥ, ವೀರೇಂದ್ರ, ಸಿದ್ದೇಶ್, ವಾಜರಹಳ್ಳಿ ಕಿರಣ್, ಶಶಿಕುಮಾರ್ ಶಾಂತರಾಜು ಹುಲಿಕುಂಟೆ ದಿನೇಶ್ ಯಾದವ್ ವೀರೇಶ್ ಅನಿಲ್ ಕುಮಾರ್ ಕರಿ ರಾಮನಹಳ್ಳಿ ರವಿ ಯಾದವ್, ಶ್ರೀಧರ, ಶಿವಕುಮಾರ್, ಬೆಜ್ಜಿಹಳ್ಳಿ ಅಭಿಷೇಕ್, ಚಿಕ್ಕಣ್ಣ,ರಾಜು, ರಾಘವೇಂದ್ರ,ಶ್ರೀನಿವಾಸ, ಬಸವರಾಜ, ಗಂಗಾಧರ ಮುಂತಾದವರು ಉಪಸ್ಥಿತರಿದ್ದರು.
ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..