ಸಿಂಧನೂರು: ಸಿಂಧನೂರು ತಾಲೂಕಿನ ಎಂಬಾತ ಒಂದು ಖಾಲಿ ಹಾಳೆಯಲ್ಲಿ ಸುಮಾರು 548 ಚಿತ್ರಗಳನ್ನು ಬಿಡಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ. ಈ ಚಿತ್ರಗಳು ಒಂದೊಂದು ಜನಾಂಗದ ಇತಿಹಾಸ, ಪರಿಚಯ, ಅವರ ಕಲೆಯ ಕುರಿತು ಬಿಂಬಿಸುತ್ತವೆ. ತಾವು ಬಿಡಿಸಿದ ಚಿತ್ರಗಳನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಗಾಗಿ ಇ- ಮೇಲ್ ಮುಖಾಂತರ ಕಳುಹಿಸಿದ್ದು, ಇವರ ಕಲಾಕೃತಿಯನ್ನು ವಿಶೇಷ ಕಲೆಯಂದು ದಾಖಲು ಮಾಡಿಕೊಂಡಿದೆ. ಮುಂದೆ ಲಿಮ್ಕಾ, ಗಿನ್ನಿಸ್ ದಾಖಲೆಗಾಗಿ ವಿಶೇಷ ಚಿತ್ರಗಳನ್ನು ಬರೆಯುವುದಾಗಿ ಉಮೇಶ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹಲವರ ಉದ್ಯೋಗ ಕಸಿದುಕೊಂಡಿದೆ. ಕೋವಿಡ್-19 ಸಂಕಷ್ಟದಿಂದ ಆರ್ಥಿಕವಾಗಿ ಚೇತರಿಸಿಕೊಂಡ ಏಕೈಕ ರಾಜ್ಯ ಕರ್ನಾಟಕ; ಡಿಸಿಎಂ ಅಶ್ವತ್ಥ ನಾರಾಯಣ ಈ ಸಂದರ್ಭದಲ್ಲಿ ಹಲವರು ಸೃಜನಾತ್ಮಕ ಕಲೆಗೆ ಒತ್ತು ಕೊಟ್ಟಿದ್ದು ಇದರ ಭಾಗವಾಗಿ ಉಮೇಶ್ ರ ಈ ಕಲಾಕೃತಿ ಹೊರಹೊಮ್ಮಿದೆ. ಉಮೇಶ್ 2006ರಿಂದ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಏಕವ್ಯಕ್ತಿಯ ಕಲಾಪ್ರದರ್ಶನಗಳು ಹಲವು ಕಡೆ ಪ್ರದರ್ಶನಗೊಂಡಿವೆ. ಇವರ ಕಲೆಯ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕಲೆಯನ್ನು ಮುಂದುವರಿಸಿದ ಉಮೇಶ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯ ಆಸೆ ಹೊಂದಿದ್ದು ಅದಕ್ಕಾಗಿ ನಿರಂತರ ಪ್ರಯತ್ನ ನಡೆಸಿದ್ದಾರೆ. ಕಲಾವಿದನಿಗೆ ಗೌರವ ಹಾಗೂ ಪ್ರಶಸ್ತಿಗಳು ಕಲೆ ಉತ್ತೇಜನಕ್ಕೆ ಸಹಕಾರಿಯಾಗಿರುತ್ತವೆ. ಅದರಂತೆ ಉಮೇಶರ ಈ ಸಾಧನೆಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲಿಸಿ, ಇವರ ಸಾಧನೆಗೆ ಒಂದು ಗೆರೆಯನ್ನು ಮೂಡಿಸಿದೆ. ಮುಂದೆಯೂ ಇವರ ಸಾಧನೆ ಮುಂದುವರಿಯಲಿ ಎಂದು ಹಲವರು ಆಶಯ ವ್ಯಕ್ತಪಡಿಸಿದ್ದಾರೆ.
ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು