ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀಯುತ ಅಮರೆಶ್ ನಾಗಲಪುರ ಇವರನ್ನುವೀರಶೈವ ಲಿಂಗಾಯತ ಯುವವೇದಿಕೆ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನಲೆಯಲ್ಲಿ ಇಂಡಿಯಾ ಪ್ರೈ ವೇಟ್ ಕಂಪನಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇನ್ನು CCTSK ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಶಿವಕುಮಾರ್ ಚಳಗೇರಿ,ಹಾಗೂ ಬಸವರಾಜ ಬುದುಗೊಂಪರವರು ಅಮರೇಶ್ ನಾಗಲಪುರ , ಇವರನ್ನು ಬಸವಣ್ಣನ ಭಾವ ಚಿತ್ರವನ್ನು ನೀಡುವ ಮೂಲಕ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಮರೇಶ ನಾಗಲಪುರ ವೀರಶೈವ ಲಿಂಗಾಯತ ಸಮಾಜ ಬೆಳೆದು ಬಂದ ಹಾದಿಯನ್ನು ಸ್ಮರಿಸಿದರು. CCTSK ಕಂಪನಿಯು ಕಳೆದ ನಾಲ್ಕು ವರ್ಷಗಳಿಂದ ಕನ್ಸ್ ಸ್ಟ್ರಕ್ಷ ನ್, ಹಾಗೂ ಪ್ಲಾನ್ ಅಪ್ರು ವಲ್, ಬಿಲ್ಡಿಂಗ್ ಡಿಸೈನ್ ಮತ್ತು ಏಳಿವೆಶನ್ ಸರ್ವೆ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.ಈ ಕಾರ್ಯಕ್ರಮದಲ್ಲಿ CCTSK ಕಂಪನಿಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.
ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು