ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಗೊಲ್ಲ ಸಮುದಾಯದ ದೇವ ಚಿತ್ರಲಿಂಗೇಶ್ವರನಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ರವರ ಪತಿ ಶ್ರೀನಿವಾಸ್ ಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಶ್ರೀನಿವಾಸ್ ನಾನು ಶಿರಾ ಉಪಚುನಾವಣೆಯ ಬಿಜೆಪಿ ಟಿಕೇಟ್ ಆಕಾಂಕ್ಷಿ ಎಂದು ತಿಳಿಸಿದರು.ಹಾಗೂ ಇವರು ಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷರಾಗಿದ್ದು, ಡಿ.ಟಿ.ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಸವರಾಜುರಿಗೆ ನಮ್ಮ ಸಮಾಜ ಆಶೀರ್ವಾದ ಮಾಡಿದೆ.ಪೂರ್ಣಿಮಾ ಅವರು ಗೆದ್ದ ಮೇಲೆ ಎಂ.ಎಲ್.ಸಿ ಗೆ ನನಗೆ ಅವಕಾಶ ಮಾಡಿಕೊಡಲು ಹೇಳಿದ್ವಿ.ಶಿರಾ ಕುಚಿಂಟಿಗ ಸಮಾಜದ ಚಿದಾನಂದಗೌಡ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ನೀಡೋ ನಿಟ್ಟಿನಲ್ಲಿ ನನಗೆ ಅವಕಾಶ ಮಾಡಿಕೊಡಲಿ.ಹಿರಿಯೂರಿನಲ್ಲಿ ಬಿಜೆಪಿ ಭಾವುಟ ಹಾರಿಸಿದಂತೆ ಶಿರಾದಲ್ಲಿ ಭಾವುಟ ಹಾರಿಸುತ್ತೇವೆ.ಪಕ್ಷದ ನಿರ್ಧಾರಕ್ಕೆ ಬದ್ದವಾಗಿದ್ದು ಆಕಾಂಕ್ಷಿಗಳಲ್ಲಿ ನಾನು ಒಬ್ಬನಾಗಿದ್ದೇನೆ.ಅಹಿಂದ ಅಭ್ಯರ್ಥಿ ಬೇಕು ಎಂದು ಈ ಭಾಗದ ಜನತೆಯ ಆಸೆಯಾಗಿದೆ.ಅವರ ಆಸೆ ಈಡೇರಬೇಕಾದ್ರೆ ಸೀಟ್ ಘೋಷಣೆಯಾಗಬೇಕು.ನನಗೆ ಆಸೆ ಇದೆ ವಿಶ್ವಾಸ ಇದೆ ಯಡಿಯೂರಪ್ಪನವರು ಅವಕಾಶ ಮಾಡಿಕೊಡ್ತಾರೆ.ಅವಕಾಶ ಕೊಟ್ರೆ ಹಿರಿಯೂರು ಫಲಿತಾಂಶ ಮರುಕಳಿಸುತ್ತೇವೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..