ಮಂಡ್ಯ

ಖಾಸಗಿ ಶಾಲಾ ಶಿಕ್ಷಕರಿಂದ ಮೌನ ಪ್ರತಿಭಟನೆ…!

Published

on

ರಾಯಚೂರು: ಖಾಸಗಿ ಶಾಲೆ, ಕಾಲೇಜುಗಳ, ಶಿಕ್ಷಕರು ಉಪನ್ಯಾಸಕರು ಕಳೆದ ಮಾರ್ಚ್ನಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಕೋವಿಡ್ ಪ್ಯಾಕೇಜ್ ಒದಗಿಸಬೇಕು. ರಾಯಚೂರು ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಮತ್ತು ಶಿಕ್ಷಕರು ಮೌನ ಪ್ರತಿಭಟನೆ ನಡೆಸಿದರು. ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ಮಂಡಳಿ ಮತ್ತು ಶಿಕ್ಷಕರು, ಸರಕಾರಿ ಮಲತಾಯಿ ಧೋರಣೆ ತೋರುತ್ತಿದೆ, ಈಗಾಗಲೇ ಹಲವು ಸಮುದಾಯದ ಜನರಿಗೂ ಹಾಗೂ ಆಟೋ ಚಾಲಕರಿಗೂ ಗೌರವಧನ ನೀಡಿದ್ದು, ನಮಗೆ ಏಕೆ ನೀಡುತ್ತಿಲ್ಲ ನಮ್ಮ ಜೀವನ ನಡೆಸಲು ಬೋಲೋ ದುಸ್ತರವಾಗಿದೆ, ಆದ್ದರಿಂದ ಸರ್ಕಾರ ಈಗಲಾದರೂ ನಮಗೆ ಕೋವಿಡ್ ಪ್ಯಾಕೇಜ್ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version