ಆನೆಕಲ್

ಮಳೆಯ ಅಬ್ಬರಕ್ಕೆ ತತ್ತರಿಸಿದ ಬೆಂಗಳೂರು ಜನ..!

Published

on

ಆನೇಕಲ್: ನಗರದಲ್ಲಿ ವರುಣನ ಅರ್ಭಟ ಜೋರಾಗಿದ್ದು ಜನರು ತತ್ತರಿಸಿ ಹೋಗಿದ್ದಾರೆ. ನಿನ್ನೇ ಸಂಜೆ ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು,ವಾಹನ ಸವಾರರು ಪರದಾಡುವ ಪರಿಸ್ಥೀತಿ ಎದುರಾಗಿತ್ತು. ಬನ್ನೇರುಘಟ್ಟ ರಸ್ತೆಯ ಟಿ. ಜಾನ್ ಕಾಲೇಜು ಬಳಿ ಮಳೆರಾಯನ ಆರ್ಭಟಕ್ಕೆ ವಾಹನ ಸವಾರರ ಪಾಡು ಹೇಳತೀರಾದ್ದಾಗಿದೆ. ಅಂಡರ್ ಪಾಸ್ ನ ಗುಂಡಿಗಳಲ್ಲಿ ನೀರು ನಿಂತಿದ್ದು, ಕೆರೆಯಾಗಿ ಮಾರ್ಪಾಡಾಗಿತ್ತು. ಇದಕ್ಕೆ ಸಂಬಂಧಪಟ್ಟಂತಹ ಬಿಬಿಎಂಪಿ ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರು ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನದೇ ಕಣ್ಣುಮುಚ್ಚಿ ಕುಳಿತಿದ್ದಾರೆ. ರಸ್ತೆಯುದ್ದಕ್ಕೂ ನೀರು ತುಂಬಿದ್ದರಿಂದ ವಾಹನಗಳನ್ನು ವಾಪಾಸ್ಸ್ ಕಳುಹಿಸಲಾಗುತ್ತಿತ್ತು. ಜನರು ಮಳೆಯಿಂದಾಗಿ ಇಷ್ಟೇಲ್ಲಾ ಸಮಸ್ಯೆ ಎದುರಿಸುತ್ತಾಯಿದ್ದರೂ ನೈಸ್ ರಸ್ತೆಯಾ ಅಧಿಕಾರಿಗಳು ಮಾತ್ರ ಇದುವರೆಗೂ ಸ್ಥಳಕ್ಕೆ ಭೇಟಿ ನೀಡದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್..

Click to comment

Trending

Exit mobile version