ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಡಿಟಿಎಂಎನ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿ ಆದಿತ್ಯ ದತ್ತ್ ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 587 ಅಂಕ ಪಡೆದಿದ್ದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಮರುಮೌಲ್ಯಮಾಪನದಲ್ಲಿ 625 ಕ್ಕೆ 601 (96.16%) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.ಈ ವಿದ್ಯಾರ್ಥಿಯು ಪಿರಿಯಾಪಟ್ಟಣದ ಆವರ್ತಿ ಗ್ರಾಮದ ರಾಜರಾಜೇಶ್ವರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಗುರುದತ್ ಪುತ್ರನಾಗಿದ್ದು ಶಾಲೆಗೆ ಟಾಪರ್ ಆಗಿದು ಶಿಕ್ಷಕರು ಪೋಷಕರು ಅಭಿನಂದಿಸಿದ್ದಾರೆ .
ವರದಿ-ಮಾಗಳಿ ರಾಮೇಗೌಡ ವರದಿಗಾರರು ಪಿರಿಯಾಪಟ್ಟಣ