ಮಂಡ್ಯ : ದೇವಾಲಯದ ಹುಂಡಿ ಕಳುವಿಗೆ ಬಂದಿದ್ದ ದುಷ್ಕರ್ಮಿಗಳು ಮೂವರನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. ನಗರದ ಹೊರವಲಯದ ಅರ್ಕೇಶ್ವರ ದೇವಾಲಯದಲ್ಲಿ ಘಟನೆ ನಡೆದಿದ್ದು, ಅರ್ಚಕ ಗಣೇಶ್,ಪ್ರಕಾಶ, ಆನಂದ ಕೊಲೆಯಾದ ದುರ್ದೈವಿಯಾಗಿದ್ದಾರೆ. ಕಳೆದ 7-8 ತಿಂಗಳಿನಿಂದ ದೇವಾಲಯದ ಹುಂಡಿ ಎಣಿಕೆ ಮಾಡಿರಲಿಲ್ಲ.ಹೀಗಾಗಿ ದುಷ್ಕರ್ಮಿಗಳು ಅರ್ಚಕರನ್ನ ಕೊಲೆ ಮಾಡಿ ಹುಂಡಿ ಹೊತ್ತೋಯ್ದಿದ್ದಾರೆ.ಅಲ್ಲದೇ ದೇವಾಲಯದಲ್ಲಿದ್ದ ಚಿನ್ನ ಹಾಗು ಬೆಳ್ಳಿ ಆಭರಣ ಕೂಡ ದರೋಡೆ ಮಾಡಿದ್ದಾರೆ ಸ್ಥಳಕ್ಕೆ ಶಾಸಕ ಎಂ.ಶ್ರೀನಿವಾಸ್, ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು