ಸಿಂಧನೂರು: ನಗರದ ಪಿಬ್ಲ್ಯುಡಿ ಕ್ಯಾಂಪ್ ನಲ್ಲಿ ಶಾಖಾದ್ರಿ ದರ್ಗಾದಲ್ಲಿ ಮುಸ್ಲಿಂ ಬಾಂಧವರಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಕೋವಿಡ್-19 ರಿಂದ ಶೀಘ್ರವಾಗಿ ಗುಣಮುಖವಾಗಲ್ಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಬಾಬರ್ ಪಾಷಾ ಮಾತನಾಡಿ ನಮ್ಮ ನೆಚ್ಚಿನ ನಾಯಕ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪನವರು ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಅವರು ಜನರ ಕಷ್ಟಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುತ್ತಿದ್ದರು, ಅವರಿಗೆ ಕೊರೊನಾ ಸೋಂಕು ತಗುಲಿರುವುದು ನಮ್ಮೆಲ್ಲರಿಗೂ ದುಃಖದ ಸಂಗತಿ. ನಾವೆಲ್ಲಾ ಮುಸ್ಲಿಂ ಬಾಂಧವರು ಒಗ್ಗೂಡಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಆದಷ್ಟೂ ಬೇಗ ವಿರೂಪಾಕ್ಷರವರು ಬೇಗ ಗುಣಮುಖರಾಗುತ್ತಾರೆ ಎಂದರು. ಇನ್ನೂ ಸಂದರ್ಭದಲ್ಲಿ ಮುನೀರ್ ಪಾಷಾ, ಬಾಬರ್ ಪಾಷಾ, ಖಾಜಿಮಲ್ಲಿಕ್ ವಕೀಲ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು