ಕೂಡ್ಲಿಗಿ: ಕೂಡ್ಲಿಗಿ ತಾಲೂಕಿನ ಖಾನ ಹೊಸಳ್ಳಿ ಪೊಲೀಸರು ಹರಪನಹಳ್ಳಿ ಡಿವೈಎಸ್ಪಿ ಮಾಹಿತಿ ಆದರಿಸಿ ಪಿಎಸ್ಐ ನಾಗರಾಜು ಪೊಲೀಸರೊಂದಿಗೆ ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ಪರುಶುರಾಮ್ ಚೌಡಪುರ ಕಂದಾಯ ವ್ಯಾಪ್ತಿಯ ಟಿ. ಬಸಾಪುರ ಗ್ರಾಮದಲ್ಲಿರುವ ತನ್ನ ಹೊಲದಲ್ಲಿ ಮೆಣಸಿನಕಾಯಿ ಬೆಳೆ ಹಾಕಿದ್ದು ಅದರ ಮಧ್ಯದಲ್ಲಿ ಯಾರಿಗೂ ಅನುಮಾನ ಬರದಂತೆ ಗಾಂಜಾ ಬೆಳೆದಿದ್ದಾನೆ ಎಂಬಾ ಖಚಿತ ಮಾಹಿತಿ ಆಧರಿಸಿ ಹರಪನಹಳ್ಳಿ ಡಿವೈಎಸ್ಪಿ ಡಿ.ಮಲ್ಲೇಶ್ ದೊಡ್ದಮನಿಯವರು ಹೊಸಳ್ಳಿ ಪಿಎಸ್ಐ ನಾಗರಾಜು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಬೆಳೆದ ಗಾಂಜಾ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವರದಿ-ನಂದೀಶ್ ನಾಯಕ್ ಎಕ್ಸ್ ಪ್ರೆಸ್ ಟಿವಿ ಕೂಡ್ಲಿಗಿ