ವಿಜಯಪುರ

ದೇಶದಲ್ಲಿ ಹಿಟ್ಲರ್ ಸಂಸ್ಕೃತಿವುಳ್ಳ ಬಿಜೆಪಿ ಸರ್ಕಾರವಿದೆ- ಯಶವಂತ್ ರಾಯಗೌಡ ಪಾಟೀಲ್..!

Published

on

ವಿಜಯಪುರ: ಬರದ ನಾಡಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಕಾವು ಆರಂಭ. ನಿಂಬೆ ನಾಡಿನ ಇಂಡಿ ಪಟ್ಟಣದ ಅಮರ ಹೊಟೇಲ್ ಆವರಣದಲ್ಲಿ ಕೆ.ಪಿ.ಸಿ.ಸಿ.ಯ ಆರೋಗ್ಯ ಹಸ್ತ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ ಇಂಡಿ ತಮ್ಮ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಹಾಗೂ ಇಂಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕೆ.ಪಿ.ಸಿ.ಸಿ.ಯ ಆರೋಗ್ಯ ಹಸ್ತ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಶಾಸಕ ಯಶವಂತ ರಾಯಗೌಡ ಪಾಟೀಲ್ ಮಾತಾನಾಡಿ ಕೊವಿಡ್ ಮಹಾಮಾರಿ ಎಷ್ಟು ತೀವ್ರವಾಗಿ ಹರಡುತ್ತಿದೆ. ಈ ಅಚಾತುರ್ಯಕ್ಕೇ ಪ್ರಧಾನ ಮಂತ್ರಿ ಮೊದಿಯವರೇ ಕಾರಣ. ಅವರ ಮಂತ್ರಿ ಮಂಡಳಕ್ಕೆ ನಾನು ತೆಗೊಳೊದಿಲ್ಲ ಇದು ಒನ್ ಮ್ಯಾನ್, ಟು ಮ್ಯಾನ್ ಮತ್ತು ಹಿಟ್ಲರ್ ಸರ್ಕಾರವಿದೆ. ಅಮಿತ್ ಷಾ ರ ದಬ್ಬಾಳಿಕೆಯ ರಾಜ ಕಾರಣವಿದೆ.ರಾಜ್ಯದಲ್ಲಿ 112 ಸಂಖ್ಯೆಯ ನಂಬರ್ ಮಾಡಬೇಕಾಗಿದ್ದ ಸರ್ಕಾರ ಅದನ್ನು ಮಾಡಲಿಕ್ಕೆ ಆಗದ ಅನೈತಿಕ ಸರ್ಕಾರ,ಅಸಮರ್ಥ ಭ್ರಷ್ಟಾಚಾರ ಸರಕಾರವಾಗಿದೆ.ಜೊತೆಗೆ ಇವತ್ತು ಜನತಾ ದಳ ಸರಕಾರ ದೇವಗೌಡರ್ ಸ್ವಾರ್ಥ ಮನೆತನ ಸರಕಾರ ವಾಗಿದೆ. ಇನ್ನೂ ಆಂತರಿಕ ವೈಮನಸ್ಸು ಬಿಡದಿದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ಗಂಡಾತರವಿದೆ ಎಂದು ಸ್ವಪಕ್ಷಕ್ಕೂ ಕೂಟಕಿದರು.ಇನ್ನೂ ಕೊರೊನಾಕ್ಕೆ ನನ್ನ ಹತ್ತೀರ ವ್ಯಾಕ್ಸಿನ್ ಇಲ್ಲ ಆದರೆ ಸ್ಥಳಿಯ ಗ್ರಾಮ ಪಂಚಾಯತ್ ರಾಜಕಾರಣದಲ್ಲಿ ವ್ಯಾಕ್ಸಿನ್ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಾಜಿ ಶಾಸಕ ರಾಜು ಆಲಗೂರ ಈ ಭಾಗದಲ್ಲಿ ಬಿಜೆಪಿ ಸರಕಾರ ಮಲಗಿಕೊಂಡಿದೆ.ಇನ್ನೂ ಜನತಾ ದಳದ ಮಾತೇ ಬೇಡ ಎಂದು ಹೇಳಿದರು. ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಹ್ಯಾಟ್ರಿಕ್ ಮಾಡುವಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ವರದಿ-ಶಂಕರ್ ಜಮಾದಾರ ಎಕ್ಸ್ಪ್ರೆಸ್ ನ್ಯೂಸ್ ಇಂಡಿ..

Click to comment

Trending

Exit mobile version