ಸಿಂಧನೂರು

ಮಹಾನಾಯಕ ಅಂಬೇಡ್ಕರ್ ಬ್ಯಾನರಿಗೆ ಅಂಬೇಡ್ಕರ್ ಗೆಳೆಯರ ಬಳಗದಿಂದ ಹೂವಿನ ನಮನ..!..

Published

on

ಸಿಂಧನೂರು: ಅಂಬೇಡ್ಕರ್ ನಗರದಿಂದ ಬೈಕ್ ರಾಲಿ ಮುಖಾಂತರ ಗಾಂಧಿ ವೃತ್ತದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಅಭಿಯಾನ ಅಂಬೇಡ್ಕರ ಅವರ ಬ್ಯಾನರ್ ಹಾಕಿ ಬ್ಯಾನರ್ ಗೆ ಹೂವಿನ ಸುರಿಮಳೆಯನೇ ಸಿಂಧನೂರಿನಲ್ಲಿ ಸುರಿಸಲಾಯಿತು. ಭಾರತ ರತ್ನ ಡಾ! ಬಿಆರ್ ಅಂಬೇಡ್ಕರ್ ಅವರ ಜೀವನಾಧರಿತ ಕಥೆಯನ್ನು ಮಹಾನಾಯಕ ಧಾರಾವಾಹಿ ಮೂಲಕ ದೇಶದ ನಾಗರಿಕರಿಗೆ ಎಳೆ ಎಳೆಯಾಗಿ ಜನರಿಗೆ ತುಪಿಸುವ ಕೆಲಸ ಮಾಡುತ್ತೀರುವ ಜೀ ಕನ್ನಡ ವಾಹಿನಿ ಹಾಗೂ ಜೀ ಕನ್ನಡ ವ್ಯವಸ್ಥಾಪಕ ರಾಘವೇಂದ್ರ ಹುಣಸೂರ್ ಅವರಿಗೆ ಡಾ! ಬಿ.ಆರ್ ಅಂಬೇಡ್ಕರ್ ಗೆಳೆಯರ ಬಳಗ ಸುಕಾಲಪೇಟೆ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿಮಾನಿಗಳು, ಹಾಗೂ ಅಂಬೇಡ್ಕರ್ ನಗರದ ನಿವಾಸಿಗಳು, ದಲಿತ ಪರ ಹೋರಾಟಗಾರರು ಭಾಗವಹಿಸಿದ್ದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version